Select Your Language

Notifications

webdunia
webdunia
webdunia
webdunia

ಭಟ್ರು ಮೂಲೆಗುಂಪು ಮಾಡಿಲ್ಲ, ವೈಟ್ ಅಂತಾರೆ ಐಂದ್ರಿತಾ

ಭಟ್ರು ಮೂಲೆಗುಂಪು ಮಾಡಿಲ್ಲ, ವೈಟ್ ಅಂತಾರೆ ಐಂದ್ರಿತಾ
PR
ಇದೇ ಗುರುವಾರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷೆಯ 'ಪರಮಾತ್ಮ'ದಲ್ಲಿ ಐಂದ್ರಿತಾ ರೇ ಕೂಡ ಒಬ್ಬ ನಾಯಕಿಯಾಗಿದ್ದರೂ, ಈಕೆಯನ್ನು ಪ್ರಚಾರದಿಂದ ದೂರ ಇಡಲಾಗಿರುವುದು ಯಾಕೆ? ನಾಗತಿಹಳ್ಳಿ ಚಂದ್ರಶೇಖರ್ ಜತೆ ಕಾಲು ಕೆರೆದು ಜಗಳ ಮಾಡಿದ್ದ ಹುಡುಗಿ ನಿರ್ದೇಶಕ ಯೋಗರಾಜ್ ಭಟ್ಟರ ಜತೆಗೂ ಮುನಿಸಿಕೊಂಡಿದ್ದಾರಾ?

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಂತಹ ಪ್ರಶ್ನೆಗಳು ಸಹಜ. ಆದರೆ ಇದಕ್ಕೆ ಐಂದ್ರಿತಾ ನೀಡುವ ಉತ್ತರ ಕುತೂಹಲಕಾರಿಯಾಗಿದೆ. "ನೀವು ಏನೇನೋ ಊಹಿಸಿಕೊಳ್ಳಬೇಕಾಗಿಲ್ಲ. ನನ್ನ ಪಾತ್ರದ ಬಗ್ಗೆ, ನನ್ನ ಬಗ್ಗೆ ಭಟ್ರು ಯಾಕೆ ಪ್ರಚಾರ ಮಾಡಿಲ್ಲ ಅನ್ನೋದನ್ನ ಚಿತ್ರ ಬಿಡುಗಡೆಯಾದ ನಂತರ ನೋಡಿ. ಅದುವರೆಗೆ ಕಾಯಿರಿ" ಎಂದಿದ್ದಾರೆ.

ಪರಮಾತ್ಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ದೀಪಾ ಸನ್ನಿಧಿ, ಐಂದ್ರಿತಾ ರೇ ಮತ್ತು ರಮ್ಯಾ ಬಾರ್ನೆ ನಾಯಕಿಯರು. ದೀಪಾ ಸನ್ನಿಧಿಗೆ ಪ್ರತಿ ಹಂತದಲ್ಲೂ ಪ್ರಚಾರ ಕೊಡುತ್ತಿರುವ ಭಟ್ರು, ಐಂದ್ರಿತಾರನ್ನು ಮೂಲೆಗುಂಪು ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರ ಹಿಂದೆ ಏನಾದ್ರೂ ಕಾರಣವಿರಬಹುದು. ಯಾವುದೋ ಒಂದು ನಿರ್ದಿಷ್ಟ ಕಾರಣಕ್ಕೆ ಭಟ್ರು ಹೀಗೆ ಮಾಡ್ತಿದ್ದಾರೆ ಅಂತಾನೇ ಅಂದುಕೊಳ್ಳಲಾಗಿತ್ತು.

ಅದೇ ಹೊತ್ತಿಗೆ, ಪರಮಾತ್ಮದ ನಂತರ ತಾನು ನಿರುದ್ಯೋಗಿ ಎಂಬ ವರದಿಗಳನ್ನು ಕೂಡ ಐಂದ್ರಿತಾ ರೇ ತಳ್ಳಿ ಹಾಕಿದ್ದಾರೆ.

"ನಾನು ನಿರುದ್ಯೋಗಿಯಲ್ಲ. ಸಿನಿಮಾಗಳು ಸಿಗುತ್ತಿಲ್ಲ ಎನ್ನುವುದು ಸರಿಯಲ್ಲ. ಸಾಕಷ್ಟು ಚಿತ್ರಗಳ ಆಫರುಗಳು ಬರುತ್ತಿವೆ. ನನ್ನಿಂದಾದ ತಪ್ಪುಗಳನ್ನು ಸರಿಪಡಿಸುವುದಕ್ಕೋಸ್ಕರ ಕೊಂಚ ಚೂಸಿಯಾಗಿದ್ದೇನೆ. ಪ್ರತಿ ವರ್ಷ ಒಂದೊಂದು ಹಿಟ್ ಚಿತ್ರ ಕೊಡುತ್ತಾ ಬಂದವಳಿಗೆ ಖಾಲಿ ಖಾಲಿ ಭೀತಿಯಿಲ್ಲ. ಈಗಲೂ ನಾನು ಕೇಳಿದಷ್ಟು ಸಂಭಾವನೆ ಕೊಡುವ ನಿರ್ಮಾಪಕರಿದ್ದಾರೆ. ರಮ್ಯಾ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಾನು" ಅಂತ ಆರೋಪಗಳಿಗೆ ಬೆಂಗಾಲಿ ಹುಡುಗಿ ಇಷ್ಟುದ್ದದ ಸ್ಪಷ್ಟನೆ ನೀಡಿದ್ದಾರೆ.

ಹಾಗಾಗಿ, 'ಪರಮಾತ್ಮ' ಮುಗಿಸಿ ಖಾಲಿ ಖಾಲಿಯಾಗಿರುವ ನಟಿ ಐಂದ್ರಿತಾ ಮನೆಯಲ್ಲೇ ಇದ್ದಾರೆ ಎಂದು ಯಾರಾದ್ರೂ ಹೇಳಿದ್ರೆ ನಂಬಬೇಡಿ, ಪ್ಲೀಸ್..!

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada