Select Your Language

Notifications

webdunia
webdunia
webdunia
webdunia

ಹರಹರ ಮೋದಿಯಲ್ಲ, ನರಹಂತಕ ಮೋದಿ, ಸಿದ್ದರಾಮಯ್ಯ ತೀವ್ರ ವಾಗ್ದಾಳಿ

ಹರಹರ ಮೋದಿಯಲ್ಲ, ನರಹಂತಕ ಮೋದಿ, ಸಿದ್ದರಾಮಯ್ಯ ತೀವ್ರ ವಾಗ್ದಾಳಿ
, ಸೋಮವಾರ, 24 ಮಾರ್ಚ್ 2014 (20:34 IST)
PR
PR
ಮೈಸೂರು: ಲೋಕಸಭೆ ಚುನಾವಣೆ ನಂತರ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರುರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,ನೀವೆಲ್ಲ ಗುಜರಾತಿನ ಗೋಧ್ರಾ ಘಟನೆಯನ್ನು ನೆನಪಿಸಿಕೊಳ್ಳಬೇಕು. ಧರ್ಮ ಧರ್ಮಗಳ ನಡುವೆ ಜಾತಿ, ಜಾತಿಗಳ ನಡುವೆ ದ್ವೇಷವನ್ನು ಬಿತ್ತಿದರು. ಬೆಂಕಿ ಹಚ್ಚಿದರು, ನರಮೇಧ ನಡೆಸಿದರು. ಮೋದಿ ಇವತ್ತು ಕೋಟಿಗಟ್ಲೆ ಖರ್ಚು ಮಾಡುತ್ತಾರಾಲ್ಲ ಎಲ್ಲಿಂದ ಹಣ ಬರುತ್ತದೆ. ಇವತ್ತು ಕೇಳಿ ಗುಜರಾತಿನಲ್ಲಿ ಬಡವರ ಸಂಖ್ಯೆ ಬೇರೆ ರಾಜ್ಯಗಳಿಗಿಂತ ಹೆಚ್ಚಾಗಿದೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರತಕ್ಕಂತಹವರು,

ಮೋದಿ ಭ್ರಷ್ಟಾಚಾರದ ಬಗ್ಗೆ ಬಹಳ ಮಾತಾಡ್ತಾರೆ, ಅವರ ರಾಜ್ಯದಲ್ಲಿ 10 ವರ್ಷಗಳ ಕಾಲ ಲೋಕಾಯುಕ್ತರನ್ನು ನೇಮಕ ಮಾಡಿರಲಿಲ್ಲ. ಇಂತಹವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡ್ತಾರಾ. ಹರಹರ ಮೋದಿಯಲ್ಲ, ನರಹರ ಮೋದಿ, ನರಹಂತಕ ಮೋದಿ, ಕರ್ನಾಟಕದಲ್ಲಿ ಬಿಜೆಪಿಯವರು ಕೋಟಿಗಟ್ಲೆ ಲೂಟಿ ಹೊಡೆದರು ಎಂದು ಸಿದ್ದರಾಮಯ್ಯ ಹೇಳಿದರು. ಈ ಬಾರಿ ಲೋಕಸಭೆಗೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಟಿಕೆಟ್ ಹಂಚಿಕೆ ಸವಾಲಿನ ಕೆಲಸವಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

Share this Story:

Follow Webdunia kannada