ಬಿಜೆಪಿ ಪ್ರಣಾಳಿಕೆಯನ್ನು "ದಿಕ್ಕುತಪ್ಪಿದ ಬಂಡವಾಳಶಾಹಿವಾದ" ಎಂದು ಜರಿದಿದ್ದ ನಿತೀಶ್ ಹೇಳಿಕೆಗೆ ಪ್ರತಿದಾಳಿ ನಡೆಸಿರುವ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ರವಿಶಂಕರ್ ಪ್ರಸಾದ್ "ಇದು ನರೇಂದ್ರಮೋದಿ ಕೈಯಲ್ಲಿ ಸೋಲುವುದು ಖಚಿತವಾಗಿರುವುದಕ್ಕೆ ಹೆದರಿರುವ ನಿತೀಶ್ ಕುಮಾರ್ರವರ ಹತಾಶ ಮಾತು" ಎಂದು ಹೀಗಳೆದಿದ್ದಾರೆ.
" ನಿತೀಶ್ ಕುಮಾರ್ ತಾನು ಎಲ್ಲರಿಗಿಂತ ಬುದ್ಧಿವಂತ 'ರಾಜಕೀಯ ಆಟಗಾರ' ಎಂದು ಅಂದುಕೊಂಡಿದ್ದಾರೆ ಮತ್ತು ರಾಜ್ಯದ ಜನರನ್ನು 'ಪೆದ್ದ' ರೆಂದು ಭಾವಿಸಿದ್ದಾರೆ. ಆದರೆ ಜನರು ಈ ಚುನಾವಣೆಯಲ್ಲಿ ಅವರನ್ನು 'ರಾಜಕೀಯ ಭಿಕ್ಷುಕ' ನನ್ನಾಗಿಸುತ್ತಾರೆ " ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ನಂದ ಕಿಶೋರ್ ಯಾದವ್ ಭವಿಷ್ಯ ನುಡಿದಿದ್ದಾರೆ.