Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಹಣದುಬ್ಬರವನ್ನು ನೀಡಿದೆ: ಗಡ್ಕರಿ

ಕಾಂಗ್ರೆಸ್ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಹಣದುಬ್ಬರವನ್ನು ನೀಡಿದೆ: ಗಡ್ಕರಿ
ಬೊಕಾರೋ , ಶನಿವಾರ, 19 ಏಪ್ರಿಲ್ 2014 (10:36 IST)
'ಕಾಂಗ್ರೆಸ್ ದೇಶಕ್ಕೆ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಹಣದುಬ್ಬರವನ್ನು ನೀಡಿದೆ' ಎಂದು ಆರೋಪಿಸಿರುವ ಬಿಜೆಪಿಯ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ 'ಎನ್‌ಡಿಎ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗಳಿಂದ ದೇಶವನ್ನು ಮುಕ್ತಗೊಳಿಸಲಿದೆ ಮತ್ತು ಮೊದಲ ಆರು ತಿಂಗಳಲ್ಲಿ 25 ಪ್ರತಿಶತ ಬೆಲೆಗಳನ್ನು ತಗ್ಗಿಸಲಿದೆ' ಎಂದು ಹೇಳಿದ್ದಾರೆ.
PTI

ಧನಬಾದ್ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದ ಅವರು "ಕಾಂಗ್ರೆಸ್ ದೇಶಕ್ಕೆ ಸಮಸ್ಯೆಯಾಗಿದೆ. ಅದು ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಹಣದುಬ್ಬರವನ್ನು ಹುಟ್ಟು ಹಾಕಿತು. ಬಿಜೆಪಿ ಅಧಿಕಾರಕ್ಕೆ ಬಂದರೆ ಆರು ತಿಂಗಳೊಳಗೆ ಹಣದುಬ್ಬರವನ್ನು ತಗ್ಗಿಸಲಿದೆ" ಎಂದು ಅವರು ಭರವಸೆ ನೀಡಿದರು.

"ಕಾಂಗ್ರೆಸ್ ಉತ್ತಮ ಆಡಳಿತ ನಡೆಸಲು ವಿಫಲವಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ತಪ್ಪು ನೀತಿಗಳನ್ನು ಜಾರಿಗೆ ತರುವ ಮೂಲಕ ದೇಶಕ್ಕೆ ಸಂಕಷ್ಟವನ್ನು ತಂದಿದೆ" ಎಂದು ಅವರು ಆರೋಪಿಸಿದ್ದಾರೆ.

"ಹಣದುಬ್ಬರ, ಭ್ರಷ್ಟಾಚಾರ ಮತ್ತು ದುರಾಡಳಿತ ಕಾಂಗ್ರೆಸ್ ಕಾರ್ಯಾಲಯದ ಹೆಗ್ಗುರುತು. ಕಾಂಗ್ರೆಸ್ 'ಬಡತನವನ್ನು ತೊಲಗಿಸಿ' ಎಂದು ಘೋಷಣೆ ನೀಡಿತ್ತು. ಆದರೆ ಜನರು ಮೊದಲಿಗಿಂತ ಹೆಚ್ಚು ಬಡತನದಲ್ಲಿ ಮುಳುಗಿ ಹೋಗಿದ್ದಾರೆ" ಎಂದು ಬಿಜೆಪಿ ನಾಯಕ ವಿರೋಧ ಪಕ್ಷಕ್ಕೆ ಚಾಟಿ ಏಟು ಬೀಸಿದ್ದಾರೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮೇಲೆ 'ಕೋಮುವಾದದ ರಾಜಕೀಯ' ನಡೆಸುತ್ತಿರುವ ಆರೋಪ ಹೊರಿಸಿದ ಅವರು ಈ ಚುನಾವಣೆ ರಾಷ್ಟ್ರದ ಭವಿಷ್ಯವನ್ನು ಬದಲಾಯಿಸಲು ಸಿಕ್ಕಿರುವ ಒಂದು ಅವಕಾಶ. ನೀವು ದೇಶವನ್ನು ರಕ್ಷಿಸಲು ಬಯಸುವುದಾದರೆ ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ಆಯ್ಕೆ ಮಾಡಿ" ಎಂದು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಪಿ.ಎಮ್. ಸಿಂಹ್‌ರಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದ ಅವರು ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್ ಅಭಿವೃದ್ಧಿ ಸಾಧಿಸಲು ವಿಫಲವಾಗಿದೆ. ಆದರೆ ನಾವದನ್ನು 5 ವರ್ಷಗಳಲ್ಲಿ ಮಾಡಿ ತೋರಿಸುತ್ತೇವೆ ಎಂದು ವಾಗ್ದಾನ ಮಾಡಿದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada