Webdunia - Bharat's app for daily news and videos

Install App

ಆತಂಕವಾದದ ನರ್ಸರಿಯಾಗಿ ಬದಲಾಗಿದೆ ದೇವರನಾಡು ಕೇರಳ: ನರೇಂದ್ರ ಮೋದಿ

Webdunia
ಬುಧವಾರ, 9 ಏಪ್ರಿಲ್ 2014 (12:55 IST)
ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿಯ ಕಾರ್ಯಸೂಚಿಯಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ "ಪ್ರವಾಸೋದ್ಯಮ ಭೂಮಿ" ಎಂದು ಹೆಸರುಗಳಿಸಿದ್ದ ಕೇರಳ ಈಗ "ಭಯೋತ್ಪಾದನೆಯ ನರ್ಸರಿ" ಯಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.
PTI

ರಾಜ್ಯದಲ್ಲಿನ ಲೋಕಸಭಾ ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು "ಕೇರಳವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬಹುದು. ಆದರೆ ಈ ಭೂಮಿಯೀಗ ಭಯೋತ್ಪಾದನೆಯ ನರ್ಸರಿಯಾಗಿ ರೂಪಾಂತರಗೊಂಡಿದೆ" ಎಂದು ಹೇಳಿದ್ದಾರೆ.

" ಕೇರಳ ಪ್ರವಾಸೋದ್ಯಮ ಆಯುರ್ವೇದ ಸೇರಿದಂತೆ ಇತರ ಸಂಪನ್ಮೂಲಗಳ ಆಗರವಾಗಿದೆ. ಆದರೆ ಆಯುರ್ವೇದ, ವೈದ್ಯಕೀಯ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಾನು ಹೊಂದಿರುವ ಸಾಮರ್ಥ್ಯದ ಲಾಭ ಗಳಿಸಲು ವಿಫಲವಾಗಿದೆ".

" ತಮ್ಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳುವ ಅವಕಾಶವನ್ನು ರಾಜ್ಯ ಸರ್ಕಾರ ನಾಶ ಮಾಡಿರುವುದರಿಂದ ಉದ್ಯೋಗದ ಹುಡುಕಾಟದಲ್ಲಿ ಯುವಜನತೆ ರಾಜ್ಯವನ್ನು ಬಿಟ್ಟು ಹೋಗುವ ಅನಿವಾರ್ಯತೆ ಎದುರಾಗಿದೆ".

" ದೇವರನಾಡು ಕೇರಳದಲ್ಲಿ ಉದ್ಯೋಗಗಳು ಸಿಗುತ್ತಿಲ್ಲ. ಹಾಗಾಗಿ ಯುವಕರು ಪರದೇಶಗಳಿಗೆ ಹೋಗುತ್ತಿದ್ದಾರೆ. ಆನಿವಾಸಿಗಳ ಹಣದ ಕಾರಣಕ್ಕೆ ರಾಜ್ಯ ಹಸಿರಾಗಿದೆ" ಎಂದು ಮೋದಿ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments