ರಾಜ್ಯದಲ್ಲಿನ ಲೋಕಸಭಾ ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು "ಕೇರಳವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬಹುದು. ಆದರೆ ಈ ಭೂಮಿಯೀಗ ಭಯೋತ್ಪಾದನೆಯ ನರ್ಸರಿಯಾಗಿ ರೂಪಾಂತರಗೊಂಡಿದೆ" ಎಂದು ಹೇಳಿದ್ದಾರೆ.
" ಕೇರಳ ಪ್ರವಾಸೋದ್ಯಮ ಆಯುರ್ವೇದ ಸೇರಿದಂತೆ ಇತರ ಸಂಪನ್ಮೂಲಗಳ ಆಗರವಾಗಿದೆ. ಆದರೆ ಆಯುರ್ವೇದ, ವೈದ್ಯಕೀಯ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಾನು ಹೊಂದಿರುವ ಸಾಮರ್ಥ್ಯದ ಲಾಭ ಗಳಿಸಲು ವಿಫಲವಾಗಿದೆ".
" ತಮ್ಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳುವ ಅವಕಾಶವನ್ನು ರಾಜ್ಯ ಸರ್ಕಾರ ನಾಶ ಮಾಡಿರುವುದರಿಂದ ಉದ್ಯೋಗದ ಹುಡುಕಾಟದಲ್ಲಿ ಯುವಜನತೆ ರಾಜ್ಯವನ್ನು ಬಿಟ್ಟು ಹೋಗುವ ಅನಿವಾರ್ಯತೆ ಎದುರಾಗಿದೆ".
" ದೇವರನಾಡು ಕೇರಳದಲ್ಲಿ ಉದ್ಯೋಗಗಳು ಸಿಗುತ್ತಿಲ್ಲ. ಹಾಗಾಗಿ ಯುವಕರು ಪರದೇಶಗಳಿಗೆ ಹೋಗುತ್ತಿದ್ದಾರೆ. ಆನಿವಾಸಿಗಳ ಹಣದ ಕಾರಣಕ್ಕೆ ರಾಜ್ಯ ಹಸಿರಾಗಿದೆ" ಎಂದು ಮೋದಿ ಗುಡುಗಿದ್ದಾರೆ.