Webdunia - Bharat's app for daily news and videos

Install App

ಅನ್ಯಾಯ ಮಾಡಿದವರನ್ನು ಸಾಯಿಸಿ ಬಿಡಿ : ಗುಡುಗಿದ ರಾಜ್ ಠಾಕ್ರೆ

Webdunia
ಮಂಗಳವಾರ, 8 ಏಪ್ರಿಲ್ 2014 (10:04 IST)
PTI
ರಾಜ್ಯದಲ್ಲಿನ ರೈತರ ಆತ್ಮಹತ್ಯೆಗೆ ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ಜವಾಬ್ದಾರರು ಎಂದು ಆರೋಪಿಸಿರುವ ಎಂಎನ್ಎಸ್ ವರಿಷ್ಠ ರಾಜ್ ಠಾಕ್ರೆ "ರೈತರೇ ಆತ್ಮಹತ್ಯೆ ಮಾಡಬೇಡಿ, ಬದಲಿಗೆ ನಿಮಗೆ ಅನ್ಯಾಯ ಮಾಡಿದವರನ್ನು ಕೊಂದು ಹಾಕಿ" ಎಂದು ಕರೆ ಕೊಟ್ಟಿದ್ದಾರೆ.

ತಮ್ಮ ಪಕ್ಷದಿಂದ ಸ್ಪರ್ಧಿಸುತ್ತಿರುವ ರಾಜು ಪಾಟೀಲ್ ರಾಜೇ ಅವರಿಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಠಾಕ್ರೆ ಈ ಮಾತನ್ನಾಡಿದ್ದಾರೆ.

" ಕಳೆದ 67 ವರ್ಷಗಳಿಂದ ಕೇವಲ -ರಸ್ತೆ, ವಿದ್ಯುತ್, ನೀರು ಮತ್ತು ಉದ್ಯೋಗ ಈ ನಾಲ್ಕನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲಾಗುತ್ತಿದೆ. ಆದರೆ ನಾಲ್ಕು ಅಂಶಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬದಲಾಗದೆ ಹಾಗೆ ಉಳಿದುಕೊಂಡಿವೆ".

" ಹಳ್ಳಿಗಳಲ್ಲಿ ಮದ್ಯ ಸುಲಭವಾಗಿ ಸಿಗುತ್ತದೆ. ಆದರೆ ಕುಡಿಯುವ ನೀರಿಗಾಗಿ ಪರದಾಡ ಬೇಕು. ಇದೇ ನಮ್ಮ ವ್ಯವಸ್ಥೆಯ ದುರಂತ" ಎಂದು ಅವರು ಕಿಡಿಕಾರಿದರು.

ತಮ್ಮ ಭಾಷಣದಲ್ಲಿ ರೈತರೊಬ್ಬರ ಆತ್ಮಹತ್ಯಾ ಪತ್ರವನ್ನು ಓದಿದ ಅವರು, ಮತದಾರರಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿಗೆ ಓಟು ನೀಡದಂತೆ ಮನವಿ ಮಾಡಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments