Select Your Language

Notifications

webdunia
webdunia
webdunia
webdunia

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಸತತ 6ನೇ ಬಾರಿಗೆ ಆಯ್ಕೆಯಾಗಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಕೇಂದ್ರ ಸಚಿವ ಸ್ಥಾನದತ್ತ ದೃಷ್ಟಿ ನೆಟ್ಟಿದ್ದಾರೆ.

1991 ರಿಂದ ಸತತವಾಗಿ ಒಂದೇ ಕ್ಷೇತ್ರದಿಂದ 6 ಸಲ ಗೆದ್ದಿರುವ ಮುನಿಯಪ್ಪ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರಾಜ್ಯ ಭೂ ಸಾರಿಗೆ ಸಚಿವರಾಗಿದ್ದರು. ಮಂತ್ರಿಯಾಗಿ ಕೇಂದ್ರದಿಂದ ರಾಜ್ಯಕ್ಕೆ ಸುಮಾರು 5 ಸಾವಿರ ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ದಿಗಾಗಿ ತಂದಿದ್ದಾರೆ.

ಜತೆಗೆ 650 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಅಭಿವೃದ್ದಿ ಆಗುತ್ತಿದ್ದರೆ ಇನ್ನೂ 60 ಕಿ.ಮೀ ಉದ್ದದ ಹೆದ್ದಾರಿ ಕೆಲಸಕ್ಕೆ ಸಮೀಕ್ಷೆ ನಡೆದಿದೆ. ಜತೆಗೆ ಚಿಕ್ಕಬಳ್ಳಾಪುರ-ಕೋಲಾರ-ಚೆನ್ನೈ ರಸ್ತೆ ಹೆದ್ದಾರಿ ಕೆಲಸ ಕೈಗೆತ್ತಿಕೊಳ್ಳುವ ಮೂಲಕ ತಾವು ಪ್ರತಿನಿಧಿಸುವ ಜಿಲ್ಲೆಗೆ ತಮ್ಮ ಕಾಲದಲ್ಲಿ ಮಹತ್ವದ ಯೋಜನೆ ನೀಡಿದ್ದಾರೆ.

ಜಿಲ್ಲೆ ಮತ್ತು ರಾಜ್ಯಕ್ಕೆ ಇನ್ನೂ ಹೆಚ್ಚಿನ ಕೆಲಸಗಳು ಆಗಬೇಕಾದರೆ ಕೇಂದ್ರ ಸಚಿವ ಸ್ಥಾನದಲ್ಲಿ ಮುಂದುವರಿಯಬೇಕು ಎಂಬುದು ಅವರ ಅಭಿಲಾಷೆ. ಆದರೆ ಈ ಬಾರಿ ರಾಜ್ಯದಿಂದ ಮೊಯ್ಲಿ, ಧರಂಸಿಂಗ್, ಮಲ್ಲಿಕಾರ್ಜುನ್ ಖರ್ಗೆ, ವಿಶ್ವನಾಥ್ ಸೇರಿದಂತೆ ಘಟಾನುಘಟಿಗಳೇ ಇರುವುದರಿಂದ ತಮಗೆ ಸಚಿವ ಸ್ಥಾನ ದೊರೆಯುವುದೇ ಎಂಬುದನ್ನು ಕಾದು ನೋಡಬೇಕು.

Share this Story:

Follow Webdunia kannada