Select Your Language

Notifications

webdunia
webdunia
webdunia
webdunia

ಮತಪತ್ರ ಪದ್ಥತಿ ಮರುಜಾರಿಗೆ ಬಿಜೆಪಿ ಒತ್ತಾಯ

ಮತಪತ್ರ ಪದ್ಥತಿ ಮರುಜಾರಿಗೆ ಬಿಜೆಪಿ ಒತ್ತಾಯ
ಇತ್ತೀಚೆಗೆ ಅಂತ್ಯಗೊಂಡ ಮಹಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಭಾರತೀಯ ಜನತಾ ಪಕ್ಷವು , ತಮ್ಮ ಹಿನ್ನೆಡೆಗೆ ವಿದ್ಯುನ್ಮಾನ ಮತಯಂತ್ರ ಕಾರಣ ಎಂದು ಹೇಳಿದ್ದು, ಹಿಂದಿನ ಪದ್ಧತಿಯಾದ ಮತಪತ್ರವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದೆ.

"ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ವಿದ್ಯುನ್ಮಾನ ಮತಯಂತ್ರ ಪದ್ಧತಿಯನ್ನು ಹಿಂತೆಗೆದುಕೊಂಡಿವೆ, ನಾವು ಸಹ ಇದನ್ನು ನಿಲ್ಲಿಸಬೇಕು" ಎಂದು ಒರಿಸ್ಸಾ ಬಿಜೆಪಿ ಅಧ್ಯಕ್ಷ ಸುರೇಶ್ ಪೂಜಾರಿ ಹೇಳಿದ್ದಾರೆ. ಅವರು ಮಾನಸಿಕ ಪುನಶ್ಚೇತನ ಕಾರ್ಯದ ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಮತಯಂತ್ರಗಳ ನಿಖರತೆಯ ಕುರಿತು ಗಂಭೀರ ಸಂಶಯಗಳನ್ನು ವ್ಯಕ್ತಪಡಿಸಿರುವ ಅವರು, ಮತಪತ್ರಗಳು ಹೆಚ್ಚು ನಿಖರ ಹಾಗೂ ವಿಶ್ವಾಸಾರ್ಹವಾಗಿರುತ್ತದೆ ಎಂದು ಅಭಿಪ್ರಾಯಿಸಿದರು. ಇದಲ್ಲದೆ, ಮತಪತ್ರಗಳನ್ನು ದಾಖಲೆಯಾಗಿ ಕಾಯ್ದಿರಿಸಬಹುದಾಗಿದೆ. ಆದರೆ ಮತಯಂತ್ರಗಳ ಮೂಲಕದ ಮತದಾನದಿಂದ ಇದು ಸಾಧ್ಯವಿಲ್ಲ ಎಂದು ಅವರು ಸಲಹೆ ಮಾಡಿದ್ದಾರೆ.

ಪೂಜಾರಿ ಅಭಿಪ್ರಾಯವನ್ನು ಅವರ ಪಕ್ಷದ ಹಿರಿಯ ನಾಯಕರು ಬೆಂಬಲಿಸಿದ್ದಾರೆ. ಇದರಲ್ಲಿ ಭುವನೇಶ್ವರ ಕೇಂದ್ರ ಕ್ಷೇತ್ರದಿಂದ ಸ್ಫರ್ಧಿಸಿ ಠೇವಣಿ ಕಳೆದುಕೊಂಡಿರುವ ಬಿ.ಬಿ. ಹರಿಚಂದನ್ ಅವರೂ ಸೇರಿದ್ದಾರೆ.

ಒರಿಸ್ಸಾದ 147 ಸ್ಥಾನಬಲದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಆರು ಸ್ಥಾನ ಗಳಿಸಿದೆ. 21 ಲೋಕಸಭಾ ಸ್ಥಾನಗಳಲ್ಲಿ ಒಂದು ಸ್ಥಾನವೂ ಬಿಜೆಪಿಗೆ ಧಕ್ಕಲಿಲ್ಲ.

2004ರ ಚುನಾವಣೆಯಲ್ಲಿ ಬಿಜೆಪಿಯು 32 ವಿಧಾನಸಭಾ ಸ್ಥಾನಗಳು ಮತ್ತು ಏಳು ಲೋಕಸಭಾ ಸ್ಥಾನಗಳನ್ನು ಗಳಿಸಿತ್ತು.

Share this Story:

Follow Webdunia kannada