Webdunia - Bharat's app for daily news and videos

Install App

ಬೋಧಿಸುವ ಮುನ್ನವೇ ಓದಲಾರಂಭಿಸಿದ ಸಚಿವರು!

Webdunia
ಶುಕ್ರವಾರ, 29 ಮೇ 2009 (18:09 IST)
ಗುರವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಒಂದಿಷ್ಟು ಲಘು ಘಟನೆಗಳು ಸಂಭವಿಸಿ ಗಂಭೀರ ಕಾರ್ಯಕ್ರಮಕ್ಕೆ ನಗೆಯ ಲೇಪನ ನೀಡಿತು.

ಇಬ್ಬರು ರಾಜ್ಯಖಾತೆ ಸಚಿವರು ಪ್ರತಿಜ್ಞಾವಿಧಿ ಸ್ವೀಕಾರದ ವೇಳೆ, ರಾಷ್ಟ್ರಪತಿ ಅವರು ಪ್ರಮಾಣ ವಚನ ಬೋಧಿಸುವ ಮುನ್ನ ತಾವಾಗಿಯೇ ಓದಲು ಆರಂಭಿಸಿದರು. ಅಷ್ಟರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನಿಲ್ಲಿನಿಲ್ಲಿ (ವೇಟ್... ವೇಟ್) ಎಂದು ನಗುತ್ತಾ ತಡೆಯೊಡ್ಡಿದ್ದುರು. ತಪ್ಪಿನ ಅರಿವಾದ ಸಚಿವರು 'ಸಾರಿ ಮೇಡಮ್' ಅನ್ನುತ್ತಾ, ಮರಳಿ ರಾಷ್ಟ್ರಪತಿಗಳು ಆರಂಭಿಸಿದ ಬಳಿಕ ಪುನರುಚ್ಚರಿಸಿದರು.

ಸಚಿವರಾದ ವಿ.ನಾರಾಯಣ ಸ್ವಾಮಿ ಹಾಗೂ ಸೌಗುತಾ ರೇ ಅವರುಗಳು ಪ್ರಮಾಣ ವಚನದ ವೇಳೆ ಗಡಿಬಿಡಿಗೊಂಡರು. ಪ್ರಧಾನಿ ಮನಮೋಹನ್ ಸಿಂಗ್, ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಸಭಾಂಗಣದಲ್ಲಿ ನೆರೆದವರೆಲ್ಲ ಮುಖವರಳಿಸಿ ನಕ್ಕುಬಿಟ್ಟರು.

ಇದೇ ವೇಳೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜೈರಾಮ್ ಶ್ರೀರಮೇಶ್ ಅವರು ಸಹಿ ಹಾಕದೆಯೇ ತೆರಳಿದರು. ಅಷ್ಟರಲ್ಲಿ ಅಲ್ಲಿದ್ದ ಅಧಿಕಾರಿ ಅವರನ್ನು ಸರ್... ಸರ್.. ಎಂದು ಕರೆದು ಸಹಿಪಡೆದುಕೊಂಡರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments