Webdunia - Bharat's app for daily news and videos

Install App

ಆಡ್ವಾಣಿ ಹೈಟೆಕ್ ಪ್ರಚಾರಕ್ಕೆ ಆರೆಸ್ಸೆಸ್ ತರಾಟೆ

Webdunia
PTI
ಇತ್ತೀಚೆಗೆ ಅಂತ್ಯಗೊಂಡಿರುವ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಎಲ್.ಕೆ. ಆಡ್ವಾಣಿ ಅವರು ಅಂತರ್ಜಾಲ ಮ‌ೂಲಕ ಪ್ರಚಾರ ಮಾಡಿರುವ ಕ್ರಮವನ್ನು ಆರ್ಎಸ್ಎಸ್ ಪತ್ರಿಕೆ ಆರ್ಗನೈಸರ್ ತೆಳುವಾಗಿ ಟೀಕಿಸಿದೆ.

" ಹೈ ಟೆಕ್ ತಂತ್ರಜ್ಞಾನಕ್ಕೆ ಅತಿಯಾದ ಅವಲಂಬನೆ ಮತ್ತು ತಳಮಟ್ಟದ, ಕ್ಷೇತ್ರಮಟ್ಟದ ನಿರ್ವಹಣೆಗಿಂತ ಹೆಚ್ಚಿನ ಮಹತ್ವ ನೀಡಿರುವುದು ಪಕ್ಷದ ಅಭ್ಯುದಯಕ್ಕೆ ಹಾನಿಯುಂಟು ಮಾಡಿತು" ಎಂಬುದಾಗಿ ಅದು ಅಭಿಪ್ರಾಯಿಸಿದೆ.

" ರಾಜಕಾರಣದ ಆಟವನ್ನು ಕ್ಷೇತ್ರದಲ್ಲಿ ಆಡಬೇಕೇ ಹೊರತು ಹವಾನಿಯಂತ್ರಿತ ಚಾಟ್ ಕೊಠಡಿಗಳಲ್ಲಿ ಅಲ್ಲ" ಎಂಬುದಾಗಿ ಆರ್ಎಸ್ಎಸ್‌ನ ಮುಖವಾಣಿಯಲ್ಲಿ ಆಡ್ವಾಣಿಯವರ ವೆಬ್‌ಸೈಟ್ ಹಾಗೂ ಆನ್‌ಲೈನ್ ಪ್ರಚಾರವನ್ನು ಪ್ರಸ್ತಾಪಿಸಿ ಟೀಕಿಸಲಾಗಿದೆ.

ಆದರೆ, ಈ ಸಂಪಾದಕೀಯದಲ್ಲಿ ಆಡ್ವಾಣಿಯವರ ವೆಬ್‌ಸೈಟ್ ಆರಂಭದ ಬಳಿಕ, ಮುರಳಿಮನೋಹರ ಜೋಷಿ ಸೇರಿದಂತೆ ಬಿಜೆಪಿಯ ಇತರ ನಾಯಕರು ಆರಂಭಿಸಿರುವ ವೆಬ್‌ಸೈಟ್‌ಗಳ ಪ್ರಸ್ತಾಪವಿಲ್ಲ. ಇದಲ್ಲದೆ ಪಕ್ಷದ ಮಾಧ್ಯಮಗಳ ಗೀಳಿನ ಕುರಿತೂ ಆರ್ಗನೈಸರ್ ಟೀಕಿಸಿದೆ.

" ಪಕ್ಷ ಹಾಗೂ ಅದರ ನೆಲೆಯ ನಡುವೆ ಯಾವುದೇ ಸಂಪರ್ಕ ಕಡಿದು ಹೋಗಿಲ್ಲ. ಬಿಜೆಪಿಯು ಆಗೀಗ ವಿರುದ್ಧ ಪ್ರಚಾರದ ಬಲಿಪಶುವಾಗಿದೆ. ಇದರಿಂದಾಗಿ ಬಿಜೆಪಿಯು ಮಾಧ್ಯಮಗಳ ಈ ವರ್ತನೆಯಿಂದ ಸ್ವಯಂ ಸೋಲಿನ ಭ್ರಾಂತಿಗೊಳಗಾಗಿತ್ತು. ಹೆಚ್ಚಿನ ನಗರ ಕ್ಷೇತ್ರಗಳಲ್ಲಿ ಸೋಲನ್ನು ಕಾಣಲು ಬಹುಶಃ ಇದೂ ಒಂದು ಕಾರಣವಾಗಿರಬಹುದು" ಎಂದದು ಹೇಳಿದೆ.

ಇದಲ್ಲದೆ ಪಕ್ಷವು ರಾಷ್ಟ್ರೀಯ ಮನೋಭಾವವನ್ನು ಅರಿತುಕೊಳ್ಳುವಲ್ಲಿ ವಿಫಲವಾಗದೆ, ರಾಷ್ಟ್ರದಲ್ಲಿ ಮೈತ್ರಿಯ ಯುಗದ ಅಂತ್ಯದ ಆರಂಭವಾಗಿದೆ" ಎಂದೂ ಅದು ದೂರಿದೆ. ಅಲ್ಲದೆ, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷ ಒಂದು, ಪಕ್ಷವು ದುರ್ಬಲವಾಗಿರುವಂತಹ ರಾಜ್ಯಗಳಲ್ಲಿ ತನ್ನ ಸಾಂಸ್ಥಿಕ ರಚನೆಯ ನಿರ್ಮಾಣದತ್ತ ಗಮನ ಹರಿಸಬೇಕು ಎಂಬ ಸಲಹೆ ನೀಡಿದೆ.

ಈ ಮಧ್ಯೆ ಬಿಜೆಪಿಯು ತನ್ನ ಮುಂದಿನ ಕಾರ್ಯಕಾರಿಣಿಯನ್ನು ಜೂನ್ 20 ಮತ್ತು 21ರಂದು ನಡೆಸಲಿದ್ದು, ಚುನಾವಣಾ ಸೋಲು ಹಾಗೂ ಭವಿಷ್ಯದ ರೂಪುರೇಷೆಗಳ ಕುರಿತು ಚರ್ಚಿಸಲಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments