Select Your Language

Notifications

webdunia
webdunia
webdunia
webdunia

ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನ

ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನ
, ಮಂಗಳವಾರ, 18 ಫೆಬ್ರವರಿ 2014 (16:27 IST)
PR
ಇಂದು ಕಟ್ಟಡಗಳು, ಮನೆಗಳ ನಿರ್ಮಾಣದಲ್ಲಿ ವಾಸ್ತುಶಾಸ್ತ್ರವು ಮುಖ್ಯಪಾತ್ರವಹಿಸುತ್ತದೆ. ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನವಾಗಿದ್ದು, ಆಯುರ್ವೇದ ಮತ್ತು ಜೋತಿಷ್ಯ ವಿಜ್ಞಾನವನ್ನು ಮಾನವ ಜೀವನದ ಜತೆ ಸಂಯೋಜಿಸುತ್ತದೆ. ವಾಸ್ತು ಭೂಮಿಯ ಆಯಸ್ಕಾಂತೀಯ ಕ್ಷೇತ್ರಗಳನ್ನು ಒಂದುಗೂಡಿಸುತ್ತದೆ.

ಗ್ರಹಗಳು ಮತ್ತು ಇತರೆ ಆಕಾಶಕಾಯಗಳಿಂದ ಕಾಸ್ಮಿಕ್ ಕಿರಣಗಳು ಹೊರಹೊಮ್ಮುತ್ತಿದ್ದು, ಅದರ ಪ್ರಭಾವದಿಂದ ಸಂತೋಷಕರ ಕುಟುಂಬ ಜೀವನ ಮತ್ತು ವ್ಯವಹಾರ ಸಮೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಪ್ರಾಚೀನ ಅತೀಂದ್ರಿಯ ವಿಜ್ಞಾನ ಮತ್ತು ಕಟ್ಟಡಗಳ ವಿನ್ಯಾಸ ಮತ್ತು ನಿರ್ಮಾಣದ ಕಲೆಯು ಸ್ತಪ್ತ್ಯ ವೇದದಲ್ಲಿ ಮ‌ೂಲವಾಗಿದ್ದು, ಅದು ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದದ ಭಾಗವಾಗಿದೆ.

ನಗರೀಕರಣ ಬೆಳೆಯುತ್ತಿರುವ ಇಂದಿನ ಯುಗ ಮತ್ತು ಕಾಲದಲ್ಲಿ, ಸ್ಥಳದ ನ್ಯೂನತೆ ಮತ್ತು ಆಧುನಿಕ ವಿಜ್ಞಾನ ವಿವರಣೆಗೆ ವಿಫಲವಾದ ಎಲ್ಲವುದರಲ್ಲೂ ಮಿತಿಮೀರಿದ ನಂಬಿಕೆಕಳೆದುಕೊಂಡಿರುವಾಗ, ವಾಸ್ತು ನಿಯಮಗಳಿಗೆ ಬದ್ಧವಾದ ಮನೆಯನ್ನು ಕನಸಿನಲ್ಲೂ ಎಣಿಸುವುದು ಕಾರ್ಯತಃ ಅಸಾಧ್ಯವೆನಿಸಿದೆ.

ಆಕಾಶ
ಭೂಮಿಯಿಂದ ದೂರದಲ್ಲಿ ನಮ್ಮ ಸೌರಮಂಡಲವಲ್ಲದೇ ಇಡೀ ಬ್ರಹ್ಮಾಂಡ ಅಸ್ತಿತ್ವವಿರುವ ಅನಂತದಲ್ಲಿ ಪರಿಣಾಮಕಾರಿ ಶಕ್ತಿಗಳು ಬೆಳಕು, ಅಗ್ನಿ, ಗುರುತ್ವಾಕರ್ಷಣ ಶಕ್ತಿ ಮತ್ತು ಅಲೆಗಳು, ಆಯಸ್ಕಾಂತೀಯ ಶಕ್ತಿ ಮತ್ತಿತರ ಶಕ್ತಿಗಳು. ಇದರ ಮುಖ್ಯ ಲಕ್ಷಣ ಶಬ್ದ.

ಗಾಳಿ(ವಾಯು)

ಸುಮಾರು 400 ಕಿಮೀ ದೂರದ ಭೂಮಿಯ ವಾತಾವರಣವು ಆಮ್ಲಜನಕ, ನೈಟ್ರೋಜನ್(78), ಕಾರ್ಬನ್ ಡೈಆಕ್ಸೈಡ್, ಹೀಲಿಯಂ ಮತ್ತಿತರ ವಿಧದ ಅನಿಲಗಳು, ಧೂಳಿನ ಕಣಗಳು, ತೇವಾಂಶ ಮತ್ತು ಕೆಲವು ಪ್ರಮಾಣದ ಆವಿಯನ್ನು ಹೊಂದಿದೆ. ಮಾನವ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಬೆಂಕಿ ಕೂಡ ಇವುಗಳ ಮೇಲೆ ಅವಲಂಬಿತವಾಗಿದೆ. ಇದರ ಮುಖ್ಯ ಲಕ್ಷಣಗಳು ಶಬ್ದ ಮತ್ತು ಸ್ಪರ್ಶ.

ಅಗ್ನಿ

ಬೆಳಕು ಮತ್ತು ಬೆಂಕಿಯ ಬಿಸಿ, ಸಿಡಿಲು, ಜ್ವಾಲಾಮುಖಿ, ಜ್ವರ ಅಥವಾ ಜ್ವಾಲೆಯ ಬಿಸಿ, ಇಂಧನ, ರಾತ್ರಿ, ಹಗಲು, ಋತುಮಾನಗಳು ಮತ್ತು ಸೌರವ್ಯೂಹದ ಮತ್ತಿತರ ಅಂಶಗಳು. ಇದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ಮತ್ತು ರೂಪ.
ಜಲ
ಮಳೆ, ನದಿ, ಸಮುದ್ರವನ್ನು ಪ್ರತಿನಿಧಿಸಿದ್ದು ದ್ರವ ರೂಪ ಅಥವಾ ಮಂಜುಗಡ್ಡೆಯ ರೂಪ, ಆವಿ ಮತ್ತು ಮೋಡದ ರೂಪದಲ್ಲಿದೆ. ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾದ ಇದು 2:1 ಅನುಪಾತದಲ್ಲಿರುತ್ತದೆ. ಪ್ರತಿಯೊಂದು ಸಸ್ಯ ಮತ್ತು ಜೀವಿಗಳಲ್ಲಿ ಕೆಲವು ಪ್ರಮಾಣದ ನೀರಿನ ಅಂಶವಿದ್ದು, ಅದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ರೂಪ ಮತ್ತು ರಸ.

ಭೂಮಿ
ಸೂರ್ಯನ ಸುತ್ತ ತಿರುಗುವ ಮ‌ೂರನೇ ಗ್ರಹವಾದ ಭೂಮಿ ಉತ್ತರ ಮತ್ತು ದಕ್ಷಿಣ ದ್ರುವಗಳೊಂದಿಗೆ ದೊಡ್ಡ ಮ್ಯಾಗ್ನೆಟ್‌ನಂತಿದೆ. ಯಾವುದೇ ಜೀವಿ ಅಥವಾ ವಸ್ತುವಿನ ಮೇಲೆ ಭೂಮಿಯ ಆಯಸ್ಕಾಂತೀಯ ಮತ್ತು ಗುರುತ್ವ ಶಕ್ತಿ ಅಗಾಧ ಪರಿಣಾಮ ಉಂಟುಮಾಡುತ್ತದೆ. ಭೂಮಿಯು ಭೂಮಧ್ಯರೇಖೆಯಲ್ಲಿ ಇಪ್ಪತ್ತಮ‌ೂರುವರೆ ಡಿಗ್ರಿ ತಲಾ 6 ತಿಂಗಳ ಕಾಲ ಎರಡೂ ಕಡೆ ವಾಲುವುದರಿಂದ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯುತ್ತಾರೆ. ಪಶ್ಚಿಮದಿಂದ ಪೂರ್ವದವರೆಗೆ ತನ್ನ ಕಕ್ಷೆಯಲ್ಲಿ ತಿರುಗುವುದರ ಫಲ ರಾತ್ರಿ, ಹಗಲು ಘಟಿಸುತ್ತದೆ. ಭೂಮಿಯ ನಾಲ್ಕನೇ ಮ‌ೂರು ಭಾಗ ನೀರು ಮತ್ತು ನಾಲ್ಕನೇ ಒಂದು ಭಾಗ ನೆಲವಾಗಿದೆ. ಅದರ ಮುಖ್ಯಲಕ್ಷಣಗಳು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗುಣ.

ವಾಸ್ತುನಿಯಮದ ಅನ್ವಯ ಕಟ್ಟಿಸಿದ ಕಟ್ಟಡಗಳು, ದೇವಸ್ಥಾನಗಳು ಇಂದಿಗೂ ಶಿಥಿಲಗೊಳ್ಳದೇ ಪ್ರಾಚೀನದ ಕಾಲದ ವಾಸ್ತುಕೌಶಲ್ಯವನ್ನು ಸಾರಿಹೇಳುತ್ತಿವೆ.
ಕೋನಾರ್ಕ್ ಸೂರ್ಯ ದೇವಸ್ಥಾನ, ಆಗ್ರಾದ ತಾಜ್ ಮಹಲ್, ಪುಟ್ಟಪರ್ತಿಯ ಸಾಯಿಬಾಬ ಆಶ್ರಮ, ಪ್ರಶಾಂತಿ ನಿಲಯಂ, ಆಂಧ್ರದ ಭದ್ರಾಚಲಂನ ಶ್ರೀರಾಮ ದೇವಸ್ಥಾನ, ತಿರುಪತಿಯ ವೆಂಕಟೇಶ್ವರ ಮಂದಿರ, ಶ್ರವಣಬೆಳಗೊಳ ಮುಂತಾದುವನ್ನು ವಾಸ್ತು ವಿನ್ಯಾಸದಲ್ಲಿ ಕಟ್ಟಿಸಲಾಗಿದೆ.

Share this Story:

Follow Webdunia kannada