Webdunia - Bharat's app for daily news and videos

Install App

ಕೆಲ ಮರಗಳು ಮನೆಗೆ ದೋಷವನ್ನು ತರುತ್ತವೆ, ಗೊತ್ತಾ?

Webdunia
ಬುಧವಾರ, 30 ಸೆಪ್ಟಂಬರ್ 2015 (19:12 IST)
ಮನೆಯ ಪರಿಸರದಲ್ಲಿ ಗಿಡ ಮರಗಳನ್ನು ನೆಡುವಾಗ ಕೆಲವು ವಾಸ್ತು ಸಂಬಂಧಿತ ಕಾರ್ಯಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ.ಕೆಲವು ಮರಗಳು ಋಣಾತ್ಮಕ ಪ್ರಭಾವವನ್ನು ಬೀರುವಂತವುಗಳಾಗಿದ್ದು ಅವುಗಳನ್ನು ಮನೆ ಪರಿಸರದಿಂದ ಆದಷ್ಟು ದೂರವಿರಿಸಿದರೆ ಉತ್ತಮ. ದುಷ್ಟ ಶಕ್ತಿಗಳನ್ನು ಆಕರ್ಷಿಸುವ ಮರಗಳು, ಬೇಗನೆ ಮುರಿದು ಬೀಳುವಂತಹ ಮರಗಳು, ಕಾಂಡದಲ್ಲಿ ಹಾಲಿರುವ ಮರಗಳು ಇತ್ಯಾದಿಗಳನ್ನು ಮನೆಯಿಂದ ಆದಷ್ಟು ದೂರವಿರಿಸಿದರೆ ಉತ್ತಮ.
 
ಕಾಸರಕ, ಬೇವಿನ ಮರ, ಹಾಳೆಮರ, ಪಪ್ಪಾಯಿ ಮೊದಲಾದವುಗಳನ್ನು ಸಾಮಾನ್ಯವಾಗಿ ಮನೆಯ ಹತ್ತಿರದಲ್ಲಿ ನೆಡಬಾರದು. ಹಿತ್ತಿಲಲ್ಲಿ ಇವುಗಳನ್ನು ಬೆಳೆಸುವುದರಿಂದ ಅಷ್ಟು ದೋಷಗಳೇನೂ ತಲೆದೋರುವುದಿಲ್ಲ.
 
ಮೇಲೆ ತಿಳಿಸಿದಂತಹ ಮರಗಳು ಋಣಾತ್ಮಕ ಗುಣಗಳನ್ನು ಆಕರ್ಷಿಸುವ ಶಕ್ತಿಯುಳ್ಳವುಗಳಾಗಿವೆ.ಇವುಗಳು ಮನೆಯ ಸಮೀಪವಿದ್ದರೆ ಪೈಶಾಚಿಕ ಶಕ್ಕಿಗಳ ಸಾನಿಧ್ಯದಿಂದಾಗಿ ದೃಷ್ಟಿ ದೋಷವು ಉಂಟಾಗಲು ಸಾಧ್ಯತೆ ಇದೆ. ಭಾಗ್ಯದೋಷ, ಆಪತ್ತುಗಳನ್ನು ಇವುಗಳು ಆಹ್ವಾನಿಸುತ್ತವೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.
 
ಅಲಂಕಾರಕ್ಕಾಗಿ ಬಳಸುವ ಹೂಗಳಿರುವ ಕಳ್ಳಿಗಿಡದಂತಿರುವ ಸಸ್ಯಗಳನ್ನು ವರ್ಜಿಸುವುದು ಒಳ್ಳೆಯದು. ತಾಳೆಮರದಿಂದಲೂ ದೋಷವುಂಟಾಗಲು ಸಾಧ್ಯವಿರುವುದರಿಂದಾಗಿ ಇದನ್ನು ಹೋಲುವಂತಿರುವ ಅಲಂಕಾರಿಕ ಸಸ್ಯಗಳನ್ನು ಸಹ ಮನೆಯಲ್ಲಿರಿಸುವುದು ಒಳ್ಳೆಯದಲ್ಲ. ಆದರೆ ಕೊನ್ನೆ ಹೂ, ದೇವದಾರು ಮೊದಲಾದ ವೃಕ್ಷಗಳನ್ನು ನೆಡುವುದರಿಂದ ಇಂತಹ ದೋಷಗಳನ್ನು ಹೋಗಲಾಡಿಸ ಬಹುದು.
 

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಶಿವನ ಅನುಗ್ರಹಕ್ಕಾಗಿ ಇಂದು ಸ್ತೋತ್ರವನ್ನು ಓದಿ

Show comments