Webdunia - Bharat's app for daily news and videos

Install App

ಮನೆ ಖರೀದಿ ಬಗ್ಗೆ ಎಚ್ಚರ

ಇಳಯರಾಜ
PTI  
ವಾಹನ ನಿಲ್ಲಿಸುವ ತಾಣಕ್ಕೆ ಕಂಬಗಳು ಮಾತ್ರವೇ ಆಧಾರವಾಗಿರುತ್ತವೆ. ಇಂಥ ಪರಿಸ್ಥಿತಿಯಲ್ಲಿ, ಕಟ್ಟಡದ ಮನೆ ಆರಿಸಿಕೊಳ್ಳುವಾಗ ಮೊದಲ ಅಂತಸ್ತು ಬಿಟ್ಟು ಬೇರೆಯೇ ಅಂತಸ್ತಿನ ಮನೆಯನ್ನೇ ಆಯ್ದುಕೊಳ್ಳುವುದು ಸೂಕ್ತ.

ಯಾಕೆಂದರೆ ಕಂಬಗಳ ಮೇಲಿರುವ ಮನೆಯ ಜನ ಜೀವನ ಅಷ್ಟೊಂದು ಸುಖದಾಯಕವಾಗಿರುವುದಿಲ್ಲ. ಈ ಮನೆಗಳಿಗೆ ಭದ್ರ ತಳಹದಿಯ ಕೊರತೆಯಿರುವುದರಿಂದ ಅವರ ಜೀವನವೂ ಸ್ಥಿರವಾಗಿರಲಾರದು ಎಂಬುದು ಇದರ ಹಿಂದಿನ ತಥ್ಯ. ಭದ್ರ ತಳಹದಿಯ ಕೊರತೆಯಿರುವ ಮನೆಗಳ ಅಡಿಯಲ್ಲಿರುವ ಕಂಬಗಳ ಮಧ್ಯೆಯೇ ಊರ್ಜಾ ಶಕ್ತಿ ಮುಕ್ತವಾಗಿ ಪ್ರವಹಿಸುತ್ತದೆ.

ಇದು ಗಂಭೀರವಾದ ದೋಷವಲ್ಲವಾದರೂ ಸಾಧ್ಯವಾದಷ್ಟು ಇಂಥ ಮನೆಗಳನ್ನು ತಪ್ಪಿಸಿ ಎರಡನೇ ಅಥವಾ ಮೇಲಿನ ಮಹಡಿಯ ಮನೆಯನ್ನು ಆಯ್ದುಕೊಳ್ಳಬಹುದು. ಇಂಥ ಕಂಬಗಳ ಮೇಲಿರುವ ಕಟ್ಟಡಗಳಲ್ಲದೆ, ಯಾವುದೇ ಫ್ಲ್ಯಾಟ್ ಖರೀದಿ ಸಂದರ್ಭ ಎಲ್ಲಕ್ಕೂ ಮೇಲಿನ ಅಂತಸ್ತಿನಲ್ಲಿರುವ ಮನೆ ಕೊಳ್ಳುವ ಮುನ್ನ ಸ್ವಲ್ಪ ಯೋಚಿಸಿ. ಅಂದರೆ ನೀವು ಆರಿಸಿದ ಮನೆ ಮೇಲೆ ನೀರಿನ ಟ್ಯಾಂಕ್ ಇದೆಯೇ ಎಂಬುದನ್ನು ಗಮನಿಸಿ. ನೀರಿನ ಟ್ಯಾಂಕ್ ಇದ್ದರೆ ಆ ಮನೆ ವಾಸಯೋಗ್ಯವಲ್ಲ.

ಆದರೆ, ಮನೆಯ ತಲೆ ಮೇಲೆಯೇ ನೀರಿನ ಟ್ಯಾಂಕ್ ಇರದೆ, ಬೇರೆ ಕಡೆಯಲ್ಲಿದ್ದರೆ ಅದನ್ನು ಖರೀದಿಸಬಹುದು. ವಿಶೇಷವಾಗಿ ಮನೆಯ ಮಲಗುವ ಕೋಣೆಯ ಮೇಲೆಯೇ ನೀರಿನ ಟ್ಯಾಂಕ್ ಇದ್ದರೆ ಅದು ಖರೀದಿಗೆ ಸರ್ವಥಾ ಯೋಗ್ಯವಲ್ಲ. ಯಾಕೆಂದರೆ ಫೆಂಗ್ ಶುಯಿ ಪ್ರಕಾರ, ಎತ್ತರದಲ್ಲಿ ನೀರಿರುವುದು ಮತ್ತು ನೀರಿನ ಕೆಳಗೇ ಮಲಗುವುದು ಯಾವತ್ತೂ ಅಪಾಯಕಾರಿ. ಒಂದೇ ಸಾಲಿನಲ್ಲಿ ಮೂರು ಬಾಗಿಲುಗಳು ಇರುವುದು ಅತ್ಯಂತ ದೋಷಕರ.

ಯಾಕೆಂದರೆ ಈ ವ್ಯವಸ್ಥೆಯಿಂದಾಗಿ ಒಂದೇ ಸಾಲಿನಲ್ಲಿರುವ ಮೂರು ಬಾಗಿಲುಗಳಲ್ಲಿ ಚಿ ಶಕ್ತಿಯು ಅತಿ ವೇಗದಿಂದ ಪ್ರವಹಿಸಿ ಹೊರಗೆ ಹೋಗುತ್ತದೆ. ಮನೆಯ ಕೊನೆಯ ಕೋಣೆಯಲ್ಲಿರುವ ವ್ಯಕ್ತಿಯ ಮೇಲೆ ಈ ದೋಷದಿಂದಾಗಿ ಕೆಟ್ಟ ಪರಿಣಾಮ ಉಂಟಾಗುತ್ತದೆ.

ಇದಕ್ಕೆ ಪರಿಹಾರವೆಂದರೆ ಮಧ್ಯದ ಒಂದು ಬಾಗಿಲಿನ ಸ್ಥಾನಾಂತರ ಮಾಡುವುದು.

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಶಿವನ ಅನುಗ್ರಹಕ್ಕಾಗಿ ಇಂದು ಸ್ತೋತ್ರವನ್ನು ಓದಿ

Show comments