Webdunia - Bharat's app for daily news and videos

Install App

ಭಾರತೀಯ ವಾಸ್ತುಶಾಸ್ತ್ರ

Webdunia
ಸೋಮವಾರ, 10 ಫೆಬ್ರವರಿ 2014 (14:13 IST)
PR
ಭಾರತೀಯ ವಾಸ್ತು ಶಾಸ್ತ್ರವು ಪ್ರಾಚೀನ ಇತಿಹಾಸ ಹೊಂದಿದೆ. ವಾಸ್ತು ಎಂದರೆ ಮನೆ, ಕಟ್ಟಡ ಇತ್ಯಾದಿ ನಿರ್ಮಾಣಗಳು. ಇವುಗಳಿಗೆ ಸಂಬಂಧಿಸಿದ ಒಳಿತು ಕೆಡುಕುಗಳನ್ನು ತಿಳಿಸುವ ಶಾಸ್ತ್ರ ಇದಾಗಿರುವುದರಿಂದ ಗೃಹಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಭಾರತೀಯ ವಾಸ್ತು ಶಾಸ್ತ್ರವು ಪಂಚಭೂತಗಳನ್ನಾಧರಿಸಿ ವಿವರಣೆ ನೀಡುತ್ತದೆ. ಗಾಳಿ, ಬೆಳಕು, ನೀರು , ನೆಲ , ಆಕಾಶ ಇತ್ಯಾದಿಗಳನ್ನಾಧರಿಸಿ ನಿರ್ಮಾಣದ ಕುರಿತು ವಿವರಣೆ ನೀಡುತ್ತದೆ. ವಾಸ್ತುಶಾಸ್ತ್ರವು ಜ್ಯೋತಿಷ್ಯದ ಒಂದು ಅಂಗವಾಗಿಯೂ ಪರಿಗಣಿಸಲ್ಪಡುತ್ತದೆ.

ಗೃಹ ಇತ್ಯಾದಿ ನಿರ್ಮಾಣದ ವೇಳೆ ನಿವೇಶನದ ಆಕಾರ, ದಿಕ್ಕುಗಳು, ಇತ್ಯಾದಿಗಳನ್ನಾಧರಿಸಿ ಮಾಹಿತಿ ನೀಡುತ್ತದೆ. ನಿವೇಶನಗಳನ್ನು ವಾಸ್ತುವಿನಲ್ಲಿ ಆಯಗಳಾಗಿ ವಿಭಾಗಿಸಿ ಮನೆಯ ವಿಸ್ತಾರಕ್ಕನುಗಣವಾಗಿ ನಿರ್ದೇಶಿಸಲಾಗುವುದು. ಇದರಂತೆ ಧ್ವಜ ಆಯ, ಗಜ ಆಯ ಮುಂತಾಗಿ ಹೆಸರಿಸಲಾಗುವುದು.

ವಾಸ್ತುವು ನಿರ್ಮಾಣ ಪರಿಸರದಲ್ಲಿರುವ ಶುಭಾರಕ ಶಕ್ತಿಯನ್ನು ಮಾಲಕನ ಹಿತಕ್ಕನುಗುಣವಾಗಿ ಮನೆಯೊಳಗೆ ಆವಾಹಿಸುವಂತಹ ಒಳಿತನ್ನುಂಟುಮಾಡುತ್ತದೆ. ಮನೆ ಇತ್ಯಾದಿ ನಿರ್ಮಾಣಗಳು ಯಾವ ದಿಕ್ಕಿಗೆ ಅಭಿಮುಖವಾಗಿರಬೇಕು. ಅನುಬಂಧಿತ ಕಟ್ಟಡಗಳು ಯಾವ ದಿಕ್ಕಿನಲ್ಲಿದ್ದರೆ ಅಶುಭ. ಈ ಮುಂತಾದ ಕಾರ್ಯಗಳನ್ನು ವಾಸ್ತು ನಿರ್ದೇಶಿಸುತ್ತದೆ.

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

Show comments