ಪ್ರಮಾಣ ವಚನವಾಗುತ್ತಿದ್ದಂತೆ ವೇದಿಕೆಯಿಂದ ಓಡಿ ಬಂದ ಸಿಎಂ ಕುಮಾರಸ್ವಾಮಿ ಮಾಡಿದ್ದೇನು ಗೊತ್ತಾ?!

Webdunia
ಬುಧವಾರ, 23 ಮೇ 2018 (16:49 IST)
ಬೆಂಗಳೂರು: ವಿಧಾನಸೌಧದ ಮುಂಭಾಗ ನಡೆದ ಭವ್ಯ ಕಾರ್ಯಕ್ರಮದಲ್ಲಿ ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬಿಳಿ ಪಂಚೆ, ಶರ್ಟ್ ಧರಿಸಿ ಕುಟುಂಬ ಸಮೇತರಾಗಿ ಬಂದಿದ್ದ ಕುಮಾರಸ್ವಾಮಿ ನಗು ನಗುತ್ತಲೇ ವೇದಿಕೆಯಲ್ಲಿದ್ದರು. ದೇವರು ಮತ್ತು ಕನ್ನಡ ನಾಡಿನ ಜನತೆ ಹೆಸರಿನಲ್ಲಿ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ತಕ್ಷಣ ವೇದಿಕೆಯಿಂದ ಕೆಳಗಿಳಿದ ಕುಮಾರಸ್ವಾಮಿ ನೇರವಾಗಿ ತಮ್ಮ ತಾಯಿ ಚೆನ್ನಮ್ಮ ಕುಳಿತಿದ್ದ ಜಾಗಕ್ಕೆ ಬಂದು ಪತ್ನಿ ಸಮೇತರಾಗಿ ಕಾಲಿಗೆರಗಿ ನಮಸ್ಕರಿಸಿದರು. ಬಳಿಕ ತಂದೆ ಎಚ್ ಡಿ ದೇವೇಗೌಡರ ಕಾಲಿಗೆರಗಲು ನೋಡಿದರೆ ಅವರೇ ಇರಲಿಲ್ಲ.

ತಮ್ಮ ಪುತ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಗಳಿಗೆಯನ್ನು ಕಣ್ತುಂಬಿಕೊಂಡ ದೇವೇಗೌಡರು ಬಂದ ಅತಿಥಿಗಳನ್ನು ಮಾತಾಡಿಸುವಲ್ಲಿ ಬ್ಯುಸಿಯಾಗಿದ್ದರು. ಬಳಿಕ ಅವರನ್ನು ಹುಡುಕಿಕೊಂಡು ಬಂದ ಸಿಎಂ ಕುಮಾರಸ್ವಾಮಿ ಆಶೀರ್ವಾದ ಪಡೆದುಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಂಜಾಬ್ ನಲ್ಲೇ 500 ಕೋಟಿ, ನಮ್ಮಲ್ಲಿ ಕಾಂಗ್ರೆಸ್ಸಿಗರು ಹೈಕಮಾಂಡ್ ಗೆ ಎಷ್ಟು ಕೊಡ್ತಾರೋ: ಆರ್ ಅಶೋಕ್

ನಿರ್ಮಲಾ ಸೀತಾರಾಮನ್ ಎಂತವ್ಳು ಅವ್ಳು ಎಂದ ಸಿದ್ದರಾಮಯ್ಯ: ವಿಡಿಯೋ

ಹೆಚ್ಚು ಮಕ್ಕಳ ಮಾಡಿಕೊಳ್ಬೇಡಿ, ಅಂತರ್ಜಾತಿ ವಿವಾಹವಾಗಿ ಎಂದ ಸಿದ್ದರಾಮಯ್ಯ

ಅಧಿಕಾರ ಹಂಚಿಕೆ ಬಗ್ಗೆ ಸೋನಿಯಾ ಗಾಂಧಿಯಿಂದಲೇ ಬಂತು ಮಹತ್ವದ ಸಂದೇಶ

ಕುಸ್ತಿ ಕದನ ತಣ್ಣಗಾಗುತ್ತಲೇ ಸಿದ್ದರಾಮಯ್ಯಗೆ ಎದುರಾಗಿದೆ ಮತ್ತೊಂದು ಪರೀಕ್ಷೆ

ಮುಂದಿನ ಸುದ್ದಿ
Show comments