Webdunia - Bharat's app for daily news and videos

Install App

ಹೊಸ ಕರಡು ನಿಯಮ ಹೊರಡಿಸಿದ ಕೇಂದ್ರ ಸರ್ಕಾರ?

Webdunia
ಗುರುವಾರ, 15 ಜುಲೈ 2021 (15:08 IST)
ನವದೆಹಲಿ (ಜುಲೈ 15): ದೇಶದಲ್ಲಿ ಡ್ರೋನ್ಗಳನ್ನು ತಯಾರಿಸಲು ಮತ್ತು ಬಳಸಲು ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ಹೊಸ ಕರಡು ನಿಯಮಗಳನ್ನು ಹೊರಡಿಸಿದ್ದು, ಅಧಿಕೃತ ಉತ್ಪಾದಕ ಅಥವಾ ಆಮದುದಾರರು ಇನ್ನು ಡ್ರೋನ್ ಉತ್ಪಾದನೆಯಲ್ಲಿ ತೊಡಗಬೇಕು ಎಂದರೆ ವಾಯುಯಾನ ನಿಯಂತ್ರಕ ಡಿಜಿಸಿಎ ಅನುಮೋದನ ಪಡೆಯಲೇಬೇಕು ಎಂದು ನಿಯಮ ರೂಪಿಸಲಾಗಿದೆ.

ಡ್ರೋನ್ ಅನ್ನು ಇತ್ತೀಚೆಗೆ  ಕೊರೋನಾ ವೈರಸ್ ಲಾಕ್ಡೌನ್ ಕಣ್ಗಾವಲು, ಸೋಂಕು ನಿಯಂತ್ರಣ ಮತ್ತು ವೀಡಿಯೋಗ್ರಫಿಯಂತಹ ಉದ್ದೇಶಗಳಿಗಾಗಿ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಡ್ರೋನ್ ಬಳಕೆ ಮಾಡಿ ವಿಡಿಯೋಗ್ರಫಿ ಮತ್ತು ಇತರೆ ಬಳಕೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಕಾರಣ ವಿಮಾನಯಾನ ಸಚಿವಾಲಯ ಡ್ರೋನ್ ಬಳಕೆಗೆ ಹೊಸ ಕರಡು ರಚನೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಇನ್ನು ಮುಂದೆ ಪ್ರತಿ ಡ್ರೋನ್ ಆಮದುದಾರರು, ತಯಾರಕರು, ವ್ಯಾಪಾರಿಗಳು, ಮಾಲೀಕರು ಮತ್ತು ಆಪರೇಟರ್ಗಳು ಡ್ರೋನ್ ಬಳಕೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮೋದನೆ ಪಡೆಯುವ ಅಗತ್ಯವಿದೆ ಎಂದು ಹೊಸ ನಿಯಮಗಳು ತಿಳಿಸಿವೆ. ಅಧಿಕೃತ ಮಾನವರಹಿತ ವಿಮಾನ ವ್ಯವಸ್ಥೆ ಆಮದುದಾರರು ಅಥವಾ ತಯಾರಕರು ಅಧಿಕೃತ ವ್ಯಾಪಾರಿ ಅಥವಾ ಮಾಲೀಕರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗೆ ಡ್ರೋನ್ ಮಾರಾಟ ಮಾಡಬಾರದು ಎಂದೂ ಸೂಚನೆ ನೀಡಲಾಗಿದೆ.

ಭಾರತದಲ್ಲಿ ಡ್ರೋನ್ ಉತ್ಪಾದನೆ ಮಾಡಬೇಕು ಎಂದರೆ ಉತ್ಪಾದನೆ ಅಥವಾ ನಿರ್ವಹಣಾ ಸೌಲಭ್ಯವನ್ನು ಪರಿಶೀಲಿಸುವ ಅಧಿಕಾರವನ್ನು ಡಿಜಿಸಿಎ ಹೊಂದಿರುತ್ತದೆ ಎಂದು ಕರಡು ತಿಳಿಸಿದೆ. ಇದಲ್ಲದೆ, ಅಪಘಾತದ ಕಾರಣದಿಂದ ಉಂಟಾಗಬಹುದಾದ ಹೊಣೆಗಾರಿಕೆಯನ್ನು ಸರಿದೂಗಿಸಲು ತೃತೀಯ ವಿಮಾ ಪಾಲಿಸಿ ಅಸ್ತಿತ್ವದಲ್ಲಿಲ್ಲದಿದ್ದರೆ ಡ್ರೋನ್ ಉತ್ಪಾದನೆಗೆ ತಡೆ ಹೇರಲಾಗುವುದು ಎಂಬುದನ್ನು ಕರಡು ನಿಯಮದಲ್ಲಿ ಸೇರಿಸಲಾಗಿದೆ.
250 ಗ್ರಾಂಗಿಂತ ಕಡಿಮೆ ಇರುವ ನ್ಯಾನೊ ಕ್ಲಾಸ್ ಡ್ರೋನ್ಗಳನ್ನು ಮಾತ್ರ ಸಾಮಾನ್ಯವಾಗಿ ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು ಎಂದು ಕರಡು ನಿಯಮಗಳು ಹೇಳಿದ್ದು, ಭಾರವಾದ ಡ್ರೋನ್ಗಳನ್ನು ನಿರ್ವಹಿಸಲು "ಅರ್ಹ ರಿಮೋಟ್ ಪೈಲಟ್" ಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ತಿಳಿಸಲಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments