ಬಾಹ್ಯಾಕಾಶಯಾನಕ್ಕೆ ಸಜ್ಜಾದ ಸಿರಿಶಾ

ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಯಾನಕ್ಕೆ ಸಜ್ಜಾದ ಆಂಧ್ರದ ಗುಂಟೂರು ಮೂಲದ ಸಿರಿಶಾ

Webdunia
ಶನಿವಾರ, 3 ಜುಲೈ 2021 (19:53 IST)
ಆಂಧ್ರ ಪ್ರದೇಶ : ಕಲ್ಪನಾ ಚಾವ್ಲಾ ಬಳಿಕ ಮತ್ತೊಬ್ಬ ಭಾರತೀಯ ಮೂಲಕ ಮಹಿಳಾ ಗಗನಯಾತ್ರಿ ಅಂತರಿಕ್ಷ  ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.












 ಆಂಧ್ರಪ್ರದೇಶದ ಗುಂಟೂರು ಮೂಲದ ಸಿರಿಶಾ ಬಾಂಡ್ಲಾ ಈಗ ಅಂತರಿಕ್ಷ ಯಾನಕ್ಕೆ ಮುಂದಾಗಿರುವ ಭಾರತ ಮೂಲದ ಎರಡನೇ ಮಹಿಳೆಯಾಗಿದ್ದು, ಬಾಹ್ಯಾಕಾಶದಲ್ಲಿ ಹಾರಾಟ ನಡೆಸಲಿರುವ ನಾಲ್ಕನೇ ಮಹಿಳಾ ಗಗನಯಾತ್ರಿ ಕೂಡ ಇವರಾಗಿದ್ದಾರೆ.  ವರ್ಜಿನ್ ಗೆಲಾಕ್ಟಿಕ್ ಯ ವಿಎಸ್ಎಸ್ ಯೂನಿಟಿ ಬಾಹ್ಯಕಾಶ ನೌಕೆಯಲ್ಲಿ ಪ್ರಯಾಣಿಸುತ್ತಿರುವ ಆರು ಜನರಲ್ಲಿ ಸಿರಿಶಾ ಕೂಡ ಒಬ್ಬರಾಗಿದ್ದಾರೆ. ಇದೇ ಜು. 11 ರಂದು ನ್ಯೂ ಮೆಕ್ಸಿಕೊದಿಂದ ಈ ಗಗನಯಾತ್ರಿಗಳು ನಭಕ್ಕೆ ಜಿಗಿಯಲಿದ್ದಾರೆ. ಬಿಲಿಯನಿಯರ್ ರಿಚರ್ಡ್ ಬ್ರೋನ್ಸನ್ ಕೂಡ ಈ ಬಾಹ್ಯಕಾಶ ಪ್ರಯಾಣದಲ್ಲಿ ಜೊತೆಯಾಗಲಿದ್ದಾರೆ.
ಪರ್ಡ್ಯೂ ವಿಶ್ವವಿದ್ಯಾಲಯದ ಏರೋನಾಟಿಕಲ್ ಇಂಜಿನಿಯರ್ ಪದವೀಧರೆಯಾಗಿರುವ 34 ವರ್ಷದ ಸಿರಿಶಾ ಈ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ತಮಗೆ ಈ ಅವಕಾಶ ಸಿಕ್ಕಿರುವುದು ಅದ್ಭುತ ಗೌರವ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ವರ್ಜಿನ್ ಗೆಲಾಕ್ಟಿಕ್ ಕೂಡ ಬಾಹ್ಯಕಾಶಕ್ಕೆ ಪ್ರಯಾಣಿಸಲಿರುವ ಆರು ಜನ ಫೋಟೋ ಹಂಚಿಕೊಂಡಿದ್ದು, ಶುಭ ಹಾರೈಸಿದೆ.
ಗುಂಟೂರಿನ ಸಿರಿಶಾ
ಸಿರಿಶಾ ಬಾಂಡ್ಲಾ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಜನಿಸಿದ್ದುಮ ಟೆಕ್ಸಾಸ್ನ ಹೂಸ್ಟನ್ನಲ್ಲಿ ಬೆಳೆದಿದ್ದಾರೆ. ಏರೋನಾಟಿಕಲ್ ಪದವೀಧರೆ ಆಗಿರುವ ಜಾರ್ಜ್ಟೌನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ. 2015ರಲ್ಲಿ ವರ್ಜಿನ್ ಗ್ಯಾಲಕ್ಟಿಕ್ನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಇದೇ ಕಂಪನಿಯಲ್ಲಿ ಅವರು ಸರ್ಕಾರಿ ವ್ಯವಹಾರಗಳ ಉಪಾಧ್ಯಕ್ಷರಾಗಿ ಕೂಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್ನಲ್ಲಿ ಕೆಲಸ ಮಾಡುವ ಮೊದಲು, ಅವರು ಟೆಕ್ಸಾಸ್ನಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ಕೆಲಸ ಮಾಡಿದರು. ಬಳಿಕ ಅವರು ಕಮರ್ಷಿಯಲ್ ಸ್ಪೇಸ್ ಫ್ಲೈಟ್ ಫೆಡರೇಶನ್ನಲ್ಲಿ ಬಾಹ್ಯಾಕಾಶ ನೀತಿಯಲ್ಲಿ ಕೆಲಸ ಆರಂಬಿಸಿದರು.
ಗಗನಯಾನಕ್ಕೆ ಮುಂದಾಗಿರುವ ಸಿರಿಶಾ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿರುವ ಭಾರತದ ಅವರ ಸಂಬಂಧಿ ರಾಮರಾವ್ ಕಣ್ಣೆಗಂಟಿ, ಆಕೆ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಭಾರತ ಅಮೆರಿಯದ ಅತ್ಯಂತ ಹಳೆಯ ಸಂಘಟನೆಯಾದ ಅಮೆರಿಕದಲ್ಲಿನ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕಾದೊಂದಿಗೆ ಸಿರಿಶಾ ನಿಕಟ ಸಂಬಂಧ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಬಾಹ್ಯಕಾಶದಲ್ಲಿ ನೌಕಾಯಾನ ಕೈಗೊಂಡ ಭಾರತ ಮೂಲಕ ಎರಡನೇ ಭಾರತೀಯ ಮೂಲದ ಮಹಿಳೆ ಇವರಾಗಿದ್ದಾರೆ. ಇದಕ್ಕೂ ಮೊದಲು ರಾಕೇಶ್ ಶರ್ಮಾ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಂ ಅಂತರಿಕ್ಷ ಯಾನ ಕೈಗೊಂಡ ಮಹಿಳೆಯರಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments