Webdunia - Bharat's app for daily news and videos

Install App

ಲೋಕಸಭಾ ಸ್ಥಾನ 1,000ಕ್ಕೆ ಹೆಚ್ಚಳಕ್ಕೆ ಸಿದ್ಧತೆ?

Webdunia
ಮಂಗಳವಾರ, 27 ಜುಲೈ 2021 (08:55 IST)
ನವದೆಹಲಿ(ಜು.27): 2024ರ ಲೋಕಸಭಾ ಚುನಾವಣೆಗೂ ಮುನ್ನ ದೇಶದಲ್ಲಿನ ಲೋಕಸಭಾ ಸದಸ್ಯರ ಸಂಖ್ಯೆಯನ್ನು ಹಾಲಿ ಇರುವ 543ರಿಂದ 1000ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇಂಥದ್ದೊಂದು ಯೋಜನೆ ಜಾರಿಗೂ ಮುನ್ನ ಈ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಯ ಅಗತ್ಯವಿದೆ ಎಂದು ಕಾಂಗ್ರೆಸ್ ಹೇಳಿದೆ.

* ಲೋಕಸಭಾ ಸ್ಥಾನ 1,000ಕ್ಕೆ ಹೆಚ್ಚಳಕ್ಕೆ ಸಿದ್ಧತೆ?
* 2024ರ ಲೋಕಸಭಾ ಚುನಾವಣೆಗೂ ಮುನ್ನ ಈ ಕ್ರಮ
* ಆದರೆ ಈ ಬಗ್ಗೆ ಚರ್ಚೆ ನಡೆಯಬೇಕು: ಕಾಂಗ್ರೆಸ್ ಆಗ್ರಹ

ಈ ಕುರಿತು ಟ್ವೀಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ್ ಮನೀಶ್ ತಿವಾರಿ, ‘ಬಿಜೆಪಿಯಲ್ಲಿರುವ ನನ್ನ ಮಿತ್ರರೇ ನೀಡಿರುವ ಖಚಿತಪಡಿಸಿದ್ದಾರೆ. ಹೊಸ ಸಂಸತ್ ಭವನದಲ್ಲಿನ ಲೋಕಸಭಾ ಹಾಲ್ ಕೂಡಾ 1000 ಜನರಿಗೆ ಅವಕಾಶ ಇರುವಂತೆಯೇ ನಿರ್ಮಿಸಲಾಗುತ್ತಿದೆ. ಇಂಥ ಬದಲಾವಣೆ ಸಾಕಷ್ಟುಪರಿಣಾಮಗಳನ್ನು ಹೊಂದಿರುವ ಕಾರಣ ಈ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಮಟ್ಟದ ಚರ್ಚೆ ನಡೆಯಬೇಕಾದ ಅವಶ್ಯಕತೆ ಇದೆ’ ಎಂದಿದ್ದಾರೆ.
‘ಸ್ಥಾನ ಹೆಚ್ಚಿಸುವ ವೇಳೆ ಮಹಿಳೆಯರಿಗೆ ಶೇ.33ರಷ್ಟುಮೀಸಲು ನೀಡುವುದು ಸೇರಿದೆಯೋ ಇಲ್ಲವೋ ಗೊತ್ತಿಲ್ಲ. ಜೊತೆಗೆ 1000 ಸದಸ್ಯರಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗವೇ ಏಕೆ? ಅದಕ್ಕಿಂತ ಹೆಚ್ಚು ಏಕಿಲ್ಲ? ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು ಶೇ.50ರಷ್ಟುಇರುವಾಗ ಅವರಿಗೆ ಹೆಚ್ಚಿನ ಸ್ಥಾನ ನೀಡದೇ ಇರುವುದು ಸಾಕಷ್ಟುಪರಿಣಾಮಗಳನ್ನು ಉಂಟು ಮಾಡಲಿದೆ’ ಎಂದು ತಿವಾರಿ ಹೇಳಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೂಡಾ ಲೋಕಸಭಾ ಸ್ಥಾನವನ್ನು 1000ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿದ್ದರು. ಜೊತೆಗೆ ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನಸಭೆಯ ಸ್ಥಾನಗಳ ಹೆಚ್ಚಳಕ್ಕೂ ಒಲವು ವ್ಯಕ್ತಪಡಿಸಿದ್ದರು. ಬ್ರಿಟಿಷರು 650, ಕೆನಡಾದವರು 443, ಅಮೆರಿಕನ್ನರು 535 ಸ್ಥಾನ ಹೊಂದಿದ್ದರೆ ನಾವೇಕೆ 1000 ಸ್ಥಾನ ಹೊಂದಲಾಗದು? 1977ರಲ್ಲಿ ದೇಶದ ಜನಸಂಖ್ಯೆ 55 ಕೋಟಿ ಇತ್ತು. ಇದೀಗ 130 ಕೋಟಿ ಆಗಿದೆ. ಈಗಿರುವ ನಿರ್ಬಂಧದ ಪ್ರಕಾರ 2026ರವರೆಗೂ ಲೋಕಸಭೆ ಮತ್ತು ವಿಧಾನಸಭೆ ಸ್ಥಾನಗಳ ಸ್ಥಾನ ಹೆಚ್ಚಳ ಮಾಡುವಂತಿಲ್ಲ. ಆದರೆ 2011ರ ಜನಗಣತಿ ವರದಿ ಆಧಾರದಲ್ಲೇ ನೋಡುವುದಾದರೆ ಲೋಕಸಭಾ ಸ್ಥಾನ ಹೆಚ್ಚಳವಾಗಲೇ ಬೇಕು ಎಂದು ಪ್ರಣಬ್ ಮುಖರ್ಜಿ ಹೇಳಿದ್ದರು.
ಹಾಲಿ ಲೋಕಸಭೆಯಲ್ಲಿ 543 ಸ್ಥಾನಗಳಿದ್ದು, ಈ ಪೈಕಿ 530 ಜನರು ರಾಜ್ಯಗಳಿಂದ, ಉಳಿದವರು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾಗುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Chinnaswamy Stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಸಿಎಂ ನಿಖರ ಮಾಹಿತಿ

Chinnaswamy Stampede: ಸ್ಥಳದಲ್ಲಿದ್ದವರು ಪ್ರಾಣ ಉಳಿಸಲು ಯತ್ನಿಸಿದರು: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣವೇನು video

Animal Attack: MPಯ ಬರ್ವಾನಿಯಲ್ಲಿ 6ಮಂದಿ ಸಾವು, ಹಲವರಿಗೆ ಗಾಯ

Pakistan: ಗನ್‌ ಜತೆ 200 ಕೈದಿಗಳು ಪರಾರಿ, ಜೈಲಿನಲ್ಲೇ ಹೀಗಾದ್ರೇ ಇನ್ನೇನ್ ಕತೆ

RCB Victory Parade: ಕಾಲ್ತುಳಿತದಲ್ಲಿ ಮೂವರು ಫ್ಯಾನ್ಸ್ ಸಾವು, ಹಲವು ಮಂದಿಗೆ ಗಾಯ

ಮುಂದಿನ ಸುದ್ದಿ
Show comments