Webdunia - Bharat's app for daily news and videos

Install App

ಪ್ರಧಾನಿ ಮೋದಿಗೆ ಅಳಿಯ ಸಿಕ್ಕಾಯ್ತು, ರಾಹುಲ್ ಗಾಂಧಿ ಮದುವೆಯಾದ್ರಂತೆ! ನಟಿ ರಮ್ಯಾ ವಿವಾದಿತ ಟ್ವೀಟ್ ಮಾಡಿದೆ ಸೆನ್ಸೇಷನ್!

Webdunia
ಬುಧವಾರ, 11 ಜುಲೈ 2018 (09:00 IST)
ನವದೆಹಲಿ: ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಅಧ್ಯಕ್ಷೆ ರಮ್ಯಾ ಮತ್ತೆ ವಿವಾದಿತ ಟ್ವೀಟ್ ಮೂಲಕ ಸುದ್ದಿಯಾಗಿದ್ದಾರೆ. ಜತೆಗೆ ತಾವೇ ಇಕ್ಕಟ್ಟಿಗೆ ಸಿಲುಕಿದ್ದಾರೆ.

ನಿನ್ನೆ ನಟಿ ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ರ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ರಾಖಿ ಸಾವಂತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಆ ಕಾರಿನ ಚಾಲಕನನ್ನು ತೋರಿಸಿ ಇವನೇ ನನ್ನ ಹುಡುಗ. ಅಮೆರಿಕಾದಲ್ಲಿ ಸಿಕ್ಕಿದ್ದಾನೆ. ಪ್ರಧಾನಿ ಮೋದಿ ಜೀ ಕೂಡಾ ಈ ವಿಡಿಯೋ ನೋಡ್ತಿರ್ತಾರೆ.  ನಾನು ನಟಿ ಅಲ್ವಾ? ಅದಕ್ಕೆ ಮೋದಿ ಜಿ ನನ್ನ ದೊಡ್ಡ ಫ್ಯಾನ್. ಮೋದಿ ಜೀ ನೋಡಿ ನಿಮ್ಮ ಅಳಿಯ ಸಿಕ್ಕಿದ್ದಾನೆ’ ಎಂದು ಟ್ವಿಟರ್ ವಿಡಿಯೋದಲ್ಲಿ ಹೇಳಿದ್ದರು.

ಇದನ್ನೇ ರಿಟ್ವೀಟ್ ಮಾಡಿದ ರಮ್ಯಾ ಮೋದಿ ಜೀ ನಿಮ್ಮ ಅಳಿಯ ಸಿಕ್ಕಾಯ್ತು ಎಂದು ಪ್ರಧಾನಿ ಮೋದಿ ಮತ್ತು ರಾಖಿ ಸಾವಂತ್ ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥ ತೇಜಿಂದರ್ ಪಾಲ್ ಸಿಂಗ್ ರಿಂದ ತಿರುಗೇಟು ಸಿಕ್ಕಿದೆ. ತೇಜಿಂದರ್ ತಮ್ಮ ಟ್ವಿಟರ್ ನಲ್ಲಿ ಓರ್ವ ಮಹಿಳೆ ನನಗೆ ರಾಹುಲ್ ಗಾಂಧಿ ಎಂದರೆ ಇಷ್ಟ. ಅವರನ್ನು ಮದುವೆಯಾಗಿದ್ದೇನೆ ಎನ್ನುವ ವಿಡಿಯೋ ಅಪ್ ಲೋಡ್ ಮಾಡಿ ಸೋನಿಯಾ ಜೀ ನಿಮ್ಮ ಸೊಸೆ ಸಿಕ್ಕಳು ಎಂದು ತಿರುಗೇಟು ನೀಡಿದ್ದಾರೆ.

ಟ್ವಿಟರ್ ನಲ್ಲಿ ಈ ರೀತಿ ಸುಖಾ ಸುಮ್ಮನೇ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ವಿವಾದಿತ ಟ್ವೀಟ್ ಹುಟ್ಟು ಹಾಕಿದ ರಮ್ಯಾಗೆ ಈಗ ಟ್ವಿಟರಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಒಬ್ಬರಂತೂ ಕಾಂಗ್ರೆಸ್ ನಲ್ಲಿ ಲೈಂಗಿಕ ಕಿರುಕುಳ ಮೇಲ್ವರ್ಗದಿಂದ, ತಳಮಟ್ಟದವರೆಗೂ ಇದೆ ಎನ್ನುವುದು ಇದರಿಂದ ಸಾಬೀತಾಯಿತು ಎಂದಿದ್ದಾರೆ. ಅಂತೂ ಏನೋ ಮಾಡಲು ಹೋಗಿ ರಮ್ಯಾ ಇನ್ನೇನೋ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivakumar: ನೀವು ಮನೆ ಸರಿಯಾಗಿ ಕಟ್ಟಿಕೊಳ್ಬೇಕು, ಆಗ ನೀರು ಬರಲ್ಲ: ಡಿಕೆ ಶಿವಕುಮಾರ್

Bengaluru Rains: ಬೆಳಿಗ್ಗೆಯಿಂದಲೇ ಶುರು ಮಳೆ, ಕಚೇರಿಗೆ ಹೋಗುವವರು ಗಮನಿಸಿ

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂದಿಲ್ಲ ಎಂದ ಡಿಕೆಶಿ: ಪ್ರತೀ ತಿಂಗಳು ಅಂದ್ರೆ ಏನರ್ಥ

Karnataka Weather: ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ, ಯಾವ ಜಿಲ್ಲೆಗೆ ಏನು ಅಲರ್ಟ್ ಇಲ್ಲಿದೆ ವಿವರ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಮುಂದಿನ ಸುದ್ದಿ