ಅಧಿಕಾರಿಗಳ ವರ್ತನೆಗೆ ಬೇಸತ್ತು ತಾನೇ ರಸ್ತೆ ನಿರ್ಮಿಸಲು ಮುಂದಾದ ಸಚಿವ!

Webdunia
ಸೋಮವಾರ, 25 ಜೂನ್ 2018 (09:01 IST)
ಲಕ್ನೋ: ಸಾಮಾನ್ಯವಾಗಿ ಜನಪ್ರತಿನಿಧಿಗಳ ಬೇಜವಾಬ್ಧಾರಿಯಿಂದ ಬೇಸತ್ತು ಜನ ಸಾಮಾನ್ಯರು ತಾವೇ ರಸ್ತೆ ಮತ್ತಿತರ ಕಾಮಗಾರಿಗೆ ಮುಂದಾಗುವ ಘಟನೆಗಳನ್ನು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದಲ್ಲಿ ಸಚಿವರೊಬ್ಬರು ಇದೇ ಕೆಲಸ ಮಾಡಿದ್ದಾರೆ.

ಅಧಿಕಾರಿಗಳ ಬೇಜವಬ್ಧಾರಿಗೆ ಬೇಸತ್ತು ಉತ್ತರ ಪ್ರದೇಶದ ಸಚಿವ ಪ್ರಕಾಶ್ ರಾಜ್ ಭರ್ ತಾವೇ ರಸ್ತೆ ರಿಪೇರಿ ಮಾಡಿದ ಘಟನೆ ನಡೆದಿದೆ. ಅಂದ ಹಾಗೆ ಇದು ನಡೆದಿರುವುದು ವಾರಣಾಸಿ ಗ್ರಾಮದ ಸಚಿವರ ಮನೆ ಹತ್ತಿರದಲ್ಲಿ.

ಸಚಿವರ ಮನೆ ಪಕ್ಕದಲ್ಲೇ ಇರುವ ರಸ್ತೆ ಕೆಟ್ಟು ತುಂಬಾ ದಿನಗಳಾಗಿತ್ತು. ಇದನ್ನು ರಿಪೇರಿ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಮಾಡಿರಲಿಲ್ಲ. ಹೀಗಾಗಿ ಬೇಸತ್ತ ಸಚಿವರು ತಾವೇ ಗುದ್ದಲಿ ತೆಗೆದುಕೊಂಡು ರಸ್ತೆ ರಿಪೇರಿಗೆ ಮುಂದಾದರು. ಸಚಿವರ ಕೆಲಸ ನೋಡಿ ಸ್ಥಳೀಯರೂ ಅವರಿಗೆ ನೆರವಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ ಪೋಸ್ಟ್

Video: ವಿಶಾಖಪಟ್ಟಣಂನಲ್ಲಿ ಕಾಲೇಜು ಹುಡುಗಿಯರ ಚುಡಾಯಿಸಿದ್ದಕ್ಕೆ ರಸ್ತೆಯಲ್ಲೇ ಕಾಲಿಗೆ ಹೊಡೆದ ಪೊಲೀಸರು: ಈ ಕ್ರಮ ಸರಿನಾ

ಪ್ರೀತಿಯಿಂದ ನೀಡಿರುವ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಡಿಕೆ ಶಿವಕುಮಾರ್ ಪುನರುಚ್ಚಾರ

ಕೇರಳದಲ್ಲಿ ಉಚಿತ ಬಸ್ ಯೋಜನೆ ಚಾಲನೆ ಸಂದರ್ಭದಲ್ಲೇ ಅವಾಂತರ: ಸಚಿವೆಯ ಮುಖ, ಮೂತಿಗೆಲ್ಲಾ ಪಾಯಸ ಅಭಿಷೇಕ Video

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments