Webdunia - Bharat's app for daily news and videos

Install App

ಅಧಿಕಾರಿಗಳ ವರ್ತನೆಗೆ ಬೇಸತ್ತು ತಾನೇ ರಸ್ತೆ ನಿರ್ಮಿಸಲು ಮುಂದಾದ ಸಚಿವ!

Webdunia
ಸೋಮವಾರ, 25 ಜೂನ್ 2018 (09:01 IST)
ಲಕ್ನೋ: ಸಾಮಾನ್ಯವಾಗಿ ಜನಪ್ರತಿನಿಧಿಗಳ ಬೇಜವಾಬ್ಧಾರಿಯಿಂದ ಬೇಸತ್ತು ಜನ ಸಾಮಾನ್ಯರು ತಾವೇ ರಸ್ತೆ ಮತ್ತಿತರ ಕಾಮಗಾರಿಗೆ ಮುಂದಾಗುವ ಘಟನೆಗಳನ್ನು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದಲ್ಲಿ ಸಚಿವರೊಬ್ಬರು ಇದೇ ಕೆಲಸ ಮಾಡಿದ್ದಾರೆ.

ಅಧಿಕಾರಿಗಳ ಬೇಜವಬ್ಧಾರಿಗೆ ಬೇಸತ್ತು ಉತ್ತರ ಪ್ರದೇಶದ ಸಚಿವ ಪ್ರಕಾಶ್ ರಾಜ್ ಭರ್ ತಾವೇ ರಸ್ತೆ ರಿಪೇರಿ ಮಾಡಿದ ಘಟನೆ ನಡೆದಿದೆ. ಅಂದ ಹಾಗೆ ಇದು ನಡೆದಿರುವುದು ವಾರಣಾಸಿ ಗ್ರಾಮದ ಸಚಿವರ ಮನೆ ಹತ್ತಿರದಲ್ಲಿ.

ಸಚಿವರ ಮನೆ ಪಕ್ಕದಲ್ಲೇ ಇರುವ ರಸ್ತೆ ಕೆಟ್ಟು ತುಂಬಾ ದಿನಗಳಾಗಿತ್ತು. ಇದನ್ನು ರಿಪೇರಿ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಮಾಡಿರಲಿಲ್ಲ. ಹೀಗಾಗಿ ಬೇಸತ್ತ ಸಚಿವರು ತಾವೇ ಗುದ್ದಲಿ ತೆಗೆದುಕೊಂಡು ರಸ್ತೆ ರಿಪೇರಿಗೆ ಮುಂದಾದರು. ಸಚಿವರ ಕೆಲಸ ನೋಡಿ ಸ್ಥಳೀಯರೂ ಅವರಿಗೆ ನೆರವಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments