ಭಾರತದ ಕೊರೋನಾ ಸಾವು 4 ಲಕ್ಷ ಅಲ್ಲ, 30 ಲಕ್ಷ: ಅಧ್ಯಯನ ವರದಿ!

Webdunia
ಗುರುವಾರ, 22 ಜುಲೈ 2021 (09:09 IST)
ನವದೆಹಲಿ(ಜು.22): ಭಾರತದಲ್ಲಿ ಕೊರೋನಾದಿಂದ ಮೃತಪಟ್ಟವರು 4 ಲಕ್ಷ ಅಲ್ಲ, ಸುಮಾರು 30 ಲಕ್ಷ ಇರಬಹುದು ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ಹೇಳಿದೆ. ‘ಸರ್ಕಾರವು ಮೃತರ ಅಂಕಿ-ಅಂಶಗಳನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸಿದೆ’ ಎಂದು ಭಾರತ ಸರ್ಕಾರ ಇತ್ತೀಚೆಗೆ ಸ್ಪಷ್ಟನೆ ನೀಡಿರುವ ನಡುವೆಯೇ ಈ ಅಧ್ಯಯನವು ಬೇರೆ ಕತೆಯನ್ನೇ ಹೇಳುತ್ತದೆ.



* ಕೊರೋನಾ ಸಾವು 4 ಲಕ್ಷ ಅಲ್ಲ, 30 ಲಕ್ಷ: ಅಮೆರಿಕದ ಅಧ್ಯಯನದ ವಿಶ್ಲೇಷಣೆ
* ಮೋದಿ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಕೂಡ ಅಧ್ಯಯನದಲ್ಲಿ ಭಾಗಿ
* 2020ರ ಜನವರಿಯಿಂದ 20201ರ ಜೂನ್ವರೆಗೆ ಅಂದಾಜಿಗಿಂತ 47 ಲಕ್ಷ ಹೆಚ್ಚು ಸಾವು
* ಇವುಗಳಲ್ಲಿ ಕೋವಿಡ್ ಸಾವಿನ ಪಾಲು ಸುಮಾರು 30 ಲಕ್ಷ

ವಾಷಿಂಗ್ಟನ್ ಮೂಲದ ಸೆಂಟರ್ ಫಾ ಗ್ಲೋಬಲ್ ಡೆವಲಪ್ಮೆಂಟ್ ಎಂಬ ಸಂಸ್ಥೆ ಈ ಅಧ್ಯಯನ ನಡೆಸಿದೆ. 2020ರ ಜನವರಿಯಿಂದ 2021ರ ಜೂನ್ವರೆಗೆ ಸಂಭವಿಸಿದ ಸಾವುಗಳನ್ನು ಸರ್ಕಾರದ ದತ್ತಾಂಶ, ಅಂತಾರಾಷ್ಟ್ರೀಯ ಅಂದಾಜು, ಸೀರೋ ಸಮೀಕ್ಷೆ ಹಾಗೂ ಮನೆ-ಮನೆ ಸಮೀಕ್ಷೆ ನಡೆಸಿ ಕ್ರೊಡೀಕರಿಸಲಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಈ ಅಧ್ಯಯನದಲ್ಲಿ ಮೋದಿ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯಂ ಕೂಡ ಭಾಗಿಯಾಗಿದ್ದು, ‘ಸಾವುಗಳು ಸಾವಿರ ಸಂಖ್ಯೆಯಲ್ಲಿಲ್ಲ. ದಶಲಕ್ಷದ ಸಂಖ್ಯೆಗಳಲ್ಲಿವೆ. ಇದು ಭಾರತದ ಅತಿ ಕೆಟ್ಟಮಾನವ ದುರಂತ’ ಎಂದಿದ್ದಾರೆ.
2020ರ ಜನವರಿಯಿಂದ 2021ರ ಜೂನ್ವರೆಗೆ ಸಂಭವಿಸಬೇಕಿದ್ದ ಅಂದಾಜು ಸಾವಿಗಿಂತ 34 ಲಕ್ಷದಿಂದ 47 ಲಕ್ಷ ಹೆಚ್ಚು ಸಾವು ಭಾರತದಲ್ಲಿ ಸಂಭವಿಸಿವೆ. ಹೀಗಾಗಿ ಹೆಚ್ಚುವರಿ 30 ಲಕ್ಷದಿಂದ 40 ಲಕ್ಷ ಸಾವುಗಳನ್ನು ಕೋವಿಡ್ ಸಾವು ಎಂದು ಹೇಳಬಹುದಾಗಿದೆ ಎಂದು ಮಂಗಳವಾರ ಪ್ರಕಟವಾದ ಅಧ್ಯಯನ ವಿವರಿಸಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರೇಕ್ ಫಾಸ್ಟ್ ಮುಗಿಸಿ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಹಳಸಿದ ಸಂಬಂಧಕ್ಕೆ ತೇಪೆ ಹಾಕಲು ಬ್ರೇಕ್ ಫಾಸ್ಟ್ ಮೀಟಿಂಗ್: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ತಂದ್ರೂ ಎಲ್ರೂ ಮೋದಿ ಮೋದಿ ಅಂತಾರೆ: ಸಿದ್ದರಾಮಯ್ಯ ಬೇಸರ

ಮುಂದಿನ ಸುದ್ದಿ
Show comments