Webdunia - Bharat's app for daily news and videos

Install App

ಲಕ್ಷ ಕೋಟಿ ದಾಟಿದ ಜಿ.ಎಸ್.ಟಿ ಯ ಆಗಸ್ಟ್ ಕಲೆಕ್ಷನ್

Webdunia
ಗುರುವಾರ, 2 ಸೆಪ್ಟಂಬರ್ 2021 (10:04 IST)
ಸತತ ಎರನೇ ತಿಂಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಮಟ್ಟ ದಾಟಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆಗಸ್ಟ್ನಲ್ಲಿ 1.12 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

ವರ್ಷದ ಹಿಂದೆ ಇದೇ ತಿಂಗಳಲ್ಲಿ ಸಂಗ್ರಹಿಸಿದ್ದಕ್ಕಿಂತ 30% ಹೆಚ್ಚಿನ ಮೊತ್ತವನ್ನು ಈ ಬಾರಿ ಸರ್ಕಾರಗಳ ಬೊಕ್ಕಸ ಸೇರಿಸಲಾಗಿದೆ. ಸಂಗ್ರಹವಾದ 1.12 ಲಕ್ಷ ಕೋಟಿ ರೂಪಾಯಿಗಳಲ್ಲಿ ಕೇಂದ್ರ ಜಿಎಸ್ಟಿ 20,522 ಕೋಟಿ ರೂ.ಗಳಿದ್ದರೆ, ರಾಜ್ಯಗಳ ಪಾಲಿಗೆ 26,605 ಕೋಟಿ ರೂ.ಗಳು ಹಾಗೂ ಸಮಗ್ರ ಜಿಎಸ್ಟಿ 56,247 ಕೋಟಿ ರೂಪಾಯಿಗಳಾಗಿವೆ. ಇದರಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 26,884 ಕೋಟಿ ರೂಪಾಯಿಗಳೂ ಸೇರಿವೆ. ಸೆಸ್ ರೂಪದಲ್ಲಿ 8,646 ಕೋಟಿ ರೂ.ಗಳು ಸಂಗ್ರಹವಾಗಿವೆ ಎಂದು ವಿತ್ತ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಜುಲೈ 2021ರಲ್ಲಿ ಜಿಎಸ್ಟಿಯ ಕಲೆಕ್ಷನ್ 1.16 ಲಕ್ಷ ಕೋಟಿ ರೂ. ಇತ್ತು. 2020ರ ಆಗಸ್ಟ್ನಲ್ಲಿ 86,449 ಕೋಟಿ ರೂ. ಗಳಷ್ಟಿದ್ದ ಜಿಎಸ್ಟಿ ಸಂಗ್ರಹ 2019ರ ಇದೇ ತಿಂಗಳಲ್ಲಿ 98,202 ಕೋಟಿ ರೂ. ಗಳಷ್ಟಿತ್ತು. ಸತತ ಒಂಬತ್ತು ತಿಂಗಳು ಲಕ್ಷ ಕೋಟಿಗೂ ಅಧಿಕ ಸಂಗ್ರಹ ಕಂಡ ಜಿಎಸ್ಟಿ ಕಲೆಕ್ಷನ್ ಜೂನ್ ತಿಂಗಳಲ್ಲಿ ಕೋವಿಡ್ ಎರಡನೇ ಅಲೆಯ ಕಾರಣ ಕುಸಿತ ಕಂಡಿತ್ತು.
"ಆರ್ಥಿಕ ಪ್ರಗತಿಯೊಂದಿಗೆ, ತೆರಿಗೆ ವಂಚನೆ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ, ಅದರಲ್ಲೂ ನಕಲಿ ಬಿಲ್ ಸೃಷ್ಟಿಕರ್ತರ ಮೇಲೆ ತೀವ್ರವಾದ ಕ್ರಮಗಳಿಂದಾಗಿ ಜಿಎಸ್ಟಿ ಸಂಗ್ರಹದಲ್ಲಿ ವೃದ್ಧಿಯಾಗಿದೆ. ಬರುವ ತಿಂಗಳುಗಳಲ್ಲೂ ಸಹ ಜಿಎಸ್ಟಿ ಕಲೆಕ್ಷನ್ ಜೋರಾಗಿರುವ ನಿರೀಕ್ಷೆಯಿದೆ" ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಎಲ್ಲೆಲ್ಲಿ ಇಲ್ಲಿದೆ ವಿವರ

ಸುಂದರವಾಗಿದ್ದಳೆಂದು ತಲೆ ಬೋಳಿಸಿ, ವರದಕ್ಷಿಣೆ ಕಿರುಕುಳ: ಯುಎಇಯಲ್ಲಿ ಮಗುವಿನೊಂದಿಗೆ ಕೇರಳ ಮಹಿಳೆ ಆತ್ಮಹತ್ಯೆ

ಶುಭಾಂಶು ಶುಕ್ಲ ಬದಲು ದಲಿತರನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು: ಕಾಂಗ್ರೆಸ್ ನಾಯಕ ಉದಿತ್ ರಾಜ್

ಬೆಂಗಳೂರು, ನೋಟ್ಸ್ ನೀಡು ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಬ್ಬರು, ಸ್ನೇಹಿತನಿಂದ ರೇಪ್‌

ಮಂತ್ರಾಲಯಕ್ಕೆ ಭೇಟಿ ನೀಡಿದ ಬಳಿಕ ಪೀಠಾಧಿಪತಿಯರನ್ನು ಭೇಟಿಯಾದ ಸಚಿವ ರಾಮಲಿಂಗಾರೆಡ್ಡಿ

ಮುಂದಿನ ಸುದ್ದಿ
Show comments