ಸದಭಿರುಚಿಯ ಕಾರ್ಯಕ್ರಮ ಎಂದೇ ಬಿಂಬಿತವಾಗಿದ್ದ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶೀಘ್ರದಲ್ಲೇ ಜೀ ಕನ್ನಡದಲ್ಲಿ ಹೊಸ ಸೀಸನ್ ಆರಂಭಿಸಲಿದೆ.
ಕಾಮಿಡಿ ಕಿಲಾಡಿಗಳು ಫಿನಾಲೆ ಹಂತ ತಲುಪಿದ್ದು ಆ ಸ್ಲಾಟನ್ನು ಈ ಕಾರ್ಯಕ್ರಮ ತುಂಬಲಿದೆ. 2014ರಿಂದ ಆರಂಭವಾದ ಈ ಕಾರ್ಯಕ್ರಮ ಹಲವಾರು ಸಾಧಕರನ್ನು ಪರಿಚಯಿಸಿತು. ಈಗ ಮೂರನೇ ಸೀಸನ್ಗೆ ಸಿದ್ಧವಾಗುತ್ತಿದೆ.
ಕಳೆದ ಸೀಸನ್ಗಳಲ್ಲಿ ಹಲವಾರು ಸಾಧಕರು, ನಟ ನಟಿಯರು ತಮ್ಮ ಜೀವನಾನುಭವಗಳನ್ನು ಸಹೃದಯಿ ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಈ ಬಾರಿ ಇನ್ನಷ್ಟು ಮನರಂಜನೆ ನೀರೀಕ್ಷಿಸಲಾಗಿದೆ. ಸೀಸನ್ 2ರ ಕೊನೆಯ ಅತಿಥಿಯಾಗಿ ಕಿಚ್ಚ ಸುದೀಪ್ ಆಗಮಿಸಿದ್ದರು. ಅವರ ಬದುಕಿನ ಕೆಲವು ಸಿಹಿಕಹಿ ಘಟನೆಗಳು ಕಾರ್ಯಕ್ರಮದಲ್ಲಿ ಅನಾವರಣಗೊಂಡಿದ್ದವು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.