Webdunia - Bharat's app for daily news and videos

Install App

ಮುನಿಸಿಕೊಂಡ ಸುದೀಪ್ : ಬಿಗ್ ಬಾಸ್ ಕನ್ನಡ ಹೋಸ್ಟ್ ಮಾಡಲ್ಲ!

Webdunia
ಬುಧವಾರ, 16 ನವೆಂಬರ್ 2016 (10:33 IST)
ಬೆಂಗಳೂರು: ಬಿಗ್ ಬಾಸ್ ಮೇಲೆ ಸುದೀಪ್  ಮುನಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಒಂದು ದಿನದ ಮಟ್ಟಿಗೆ ಅತಿಥಿಯಾಗಿ ಬಂದಿದ್ದ ಹುಚ್ಚ ವೆಂಕಟ್ ಸ್ಪರ್ಧಿ ಪ್ರಥಮ್ ಗೆ ಹೊಡೆದಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದುವೇ ಸುದೀಪ್ ಮುನಿಸಿಗೆ ಕಾರಣವಾಗಿದೆ.

ಈ ಎಪಿಸೋಡ್ ನಿನ್ನೆ ಪ್ರಸಾರವಾಗಿದ್ದು, ಇದನ್ನು ವೀಕ್ಷಿಸಿದ ಸುದೀಪ್ ಇದರಲ್ಲಿ ಹುಚ್ಚ ವೆಂಕಟ್ ರದ್ದು ತಪ್ಪಿದೆ. ಅವರು ಸ್ಪರ್ಧಿಯ ಮೇಲೆ ಕೈ ಮಾಡಿದ್ದು ಸರಿಯಲ್ಲ. ಹೀಗಾಗಿ ಹುಚ್ಚ ವೆಂಕಟ್ ಗೆ ಶಿಕ್ಷೆಯಾಗುವವರೆಗೂ ತಾನು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಘೋಷಿಸಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಸುದೀಪ್ ಪ್ರಕಟಿಸಿದ್ದಾರೆ.

“ಈಗಷ್ಟೇ ಎಪಿಸೋಡ್ ನೋಡಿದೆ. ಆತ ಸೀದಾ ಮನೆಯೊಳಗೆ ಹೋಗಿ ಒಬ್ಬನಿಗೆ ಹೊಡೆದು ರಾಜಾರೋಷವಾಗಿ ಬರಬಹುದು ಎಂದುಕೊಂಡಿದ್ದರೆ ಅದು ಆತನ ತಪ್ಪು. ಆತನ ನಡೆ ಅಕ್ಷಮ್ಯ. ಹೀಗಾಗಿ ಆತನಿಗೆ ಶಿಕ್ಷೆಯಾಗುವವರೆಗೂ ನಾನು ಕಾರ್ಯಕ್ರಮ ನಿರೂಪಿಸುವುದಿಲ್ಲ. ಇದು ವೀಕ್ಷಕರಿಗೆ ನನ್ನ ಪ್ರಾಮಿಸ್” ಎಂದು ಸುದೀಪ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ವಿವಾದದಿಂದಾಗಿ ಕರ್ಣ ಸೀರಿಯಲ್ ನಿಂದ ಹೊರಬಂದರಾ ಭವ್ಯಾ ಗೌಡ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ಮುಂದಿನ ಸುದ್ದಿ
Show comments