ಸ್ಟಾರ್ ಸುವರ್ಣ ವಾಹನಿಯ ಅತ್ಯಂತ ಜನಪ್ರಿಯ ಧಾರಾವಾಹಿಯಾದ ಹರ ಹರ ಮಹಾದೇವ ಧಾರವಾಹಿಯು ಮತ್ತೊಂದು ಪ್ರಮುಖ ಘಟ್ಟವನ್ನು ತಲುಪಿದೆ. ಪಾರ್ವತಿ ಮಹಾದೇವರ ವಿವಾಹದ ನಂತರದಲ್ಲಿ ಹಿಮವಂತನ ಅರಮನೆಗೆ ವಿದಾಯ ಹೇಳಿ ಕೈಲಾಸಕ್ಕೆ ಬಂದ ಪಾರ್ವತಿ ಮತ್ತು ಮಹಾದೇವರ ಜನುಮಾಂತರದ ನಂಟನ್ನು ಒಡೆಯಲು ತಾರಾಕಾಸುರ ಹುನ್ನಾರ ನಡೆಸಿ ಇದೀಗ ದೇವತೆಗಳ ಮೇಲೆ ಆಕ್ರಮಣ ಮಾಡಲು ರಕ್ತಬೀಜಾಸುರನ ಆಗಮನವಾಗಿದೆ.
ಲೋಕ ಕಂಟಕನಾದ ರಕ್ತಬೀಜಾಸುರನ ಸಂಹಾರ ಮಾಡಲು ಪಾರ್ವತಿ ಭದ್ರಕಾಳಿಯಾಗುವ ಈ ಸಂಚಿಕೆ ಅತ್ಯಂತ ವೈಭವದಿಂದ ಮೂಡಿಬಂದಿದ್ದು ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವುದರಲ್ಲಿ ಸಂಶಯವೇ ಇಲ್ಲ. ಪಾರ್ವತಿ ವಿವಾಹ ಮಹೋತ್ಸವ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.