Webdunia - Bharat's app for daily news and videos

Install App

ರಕ್ತಬೀಜಾಸುರನ ಸಂಹಾರಕ್ಕೆ - ಪಾರ್ವತಿಯ “ಭದ್ರಕಾಳಿಯ ಅವತಾರ”

Webdunia
ಶುಕ್ರವಾರ, 2 ಡಿಸೆಂಬರ್ 2016 (10:34 IST)
ಸ್ಟಾರ್ ಸುವರ್ಣ ವಾಹನಿಯ ಅತ್ಯಂತ ಜನಪ್ರಿಯ ಧಾರಾವಾಹಿಯಾದ ಹರ ಹರ ಮಹಾದೇವ ಧಾರವಾಹಿಯು ಮತ್ತೊಂದು ಪ್ರಮುಖ ಘಟ್ಟವನ್ನು ತಲುಪಿದೆ. ಪಾರ್ವತಿ ಮಹಾದೇವರ ವಿವಾಹದ ನಂತರದಲ್ಲಿ ಹಿಮವಂತನ ಅರಮನೆಗೆ ವಿದಾಯ ಹೇಳಿ ಕೈಲಾಸಕ್ಕೆ ಬಂದ ಪಾರ್ವತಿ ಮತ್ತು ಮಹಾದೇವರ ಜನುಮಾಂತರದ ನಂಟನ್ನು ಒಡೆಯಲು ತಾರಾಕಾಸುರ ಹುನ್ನಾರ ನಡೆಸಿ ಇದೀಗ ದೇವತೆಗಳ ಮೇಲೆ ಆಕ್ರಮಣ ಮಾಡಲು ರಕ್ತಬೀಜಾಸುರನ ಆಗಮನವಾಗಿದೆ. 
 
ವಾರವಿಡಿ ಭದ್ರಕಾಳಿಯ ಅವತಾರದ ಮಹಿಮೆಗಳಿಂದ ಕೂಡಿದ್ದು, ಪಾರ್ವತಿ ಭದ್ರಕಾಳಿ ಅವತಾರ ತಾಳುತ್ತಾ ರಕ್ತಬೀಜಾಸುರನ ಸಂಹಾರ ಮಾಡುವ ರೋಚಕ ಸಂಚಿಕೆಗೆ ಕ್ಷಣಗಣನೆ ಆರಂಭವಾಗಿದೆ. ಭದ್ರಕಾಳಿಯನ್ನು ಸಂತೈಸಲು ಮಹಾದೇವ ಮುಂದಾದಾಗ ಭದ್ರಕಾಳಿ ಮಹಾದೇವನ ಎದೆಯನ್ನು ಮೆಟ್ಟುತಾ ರಕ್ತಬೀಜಾಸುರನನ್ನು ಸಂಹರಿಸುವ ಕುತೂಹಲಭರಿತ ಸಂಚಿಕೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ. 
 
ಲೋಕ ಕಂಟಕನಾದ ರಕ್ತಬೀಜಾಸುರನ ಸಂಹಾರ ಮಾಡಲು ಪಾರ್ವತಿ ಭದ್ರಕಾಳಿಯಾಗುವ ಈ ಸಂಚಿಕೆ ಅತ್ಯಂತ ವೈಭವದಿಂದ ಮೂಡಿಬಂದಿದ್ದು ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವುದರಲ್ಲಿ ಸಂಶಯವೇ ಇಲ್ಲ. ಪಾರ್ವತಿ ವಿವಾಹ ಮಹೋತ್ಸವ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments