Webdunia - Bharat's app for daily news and videos

Install App

ಅಮೃತವರ್ಷಿಣಿ ಮತ್ತು ಅವನು ಮತ್ತೆ ಶ್ರಾವಣಿ “ಮಹಾ ಸಂಚಿಕೆ”

Webdunia
ಮಂಗಳವಾರ, 17 ಜನವರಿ 2017 (11:50 IST)
ಸ್ಟಾರ್ ಸುವರ್ಣವಾಹಿನಿಯ ಹೆಮ್ಮೆಯ ಧಾರಾವಾಹಿಗಳೆಂದೇ ಪ್ರಸಿದ್ಧಿಯಾದ ‘ಅಮೃತವರ್ಷಿಣಿ’ಮತ್ತು ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿಗಳು ಕರುನಾಡ ವೀಕ್ಷಕರ ಪ್ರೀತಿಗೆ ಪಾತ್ರವಾಗಿವೆ. ಸಾವಿರಾರು ಕಂತುಗಳನ್ನು ಪೂರ್ಣಗೊಳಿಸಿ ಜನಮನ ಗೆದ್ದ ಯಶಸ್ವಿಯ ಧಾರಾವಾಹಿಗಳು. ಈ ಹಿನ್ನಲೆಯಲ್ಲಿ ಸ್ಟಾರ್ ಸುವರ್ಣ ಇವೆರಡನ್ನು ಕೂಡಿಸಿಕೊಂಡು “ಮಹಾಸಂಚಿಕೆ”ಯನ್ನು ಮಾಡಲು ನಿರ್ಧರಿಸಿದೆ. 
 
ಜನವರಿ 16ರಿಂದ ಈ ಸಂಚಿಕೆಗಳು ಪ್ರಾರಂಭವಾಗುತ್ತವೆ. ಈಗಾಗಲೇ ಈ ಎರಡು ಧಾರವಾಹಿಗಳ ನಾಯಕಿಯರು ಅತ್ಯಂತ ಕಷ್ಟ ಹಾಗು ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಈ ಎರಡು ಕುಟುಂಬದವರು ಪುಣ್ಯಕ್ಷೇತ್ರಕ್ಕೆ ಒಟ್ಟಿಗೆ ಹೋಗುವುದು ಅಲ್ಲಿ ಇವರುಗಳ ನಡುವೆ ಇರುವ ಆಂತರಿಕ ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರಕ್ಕಾಗಿ ಸಾಕಷ್ಟು ಪ್ರಯತ್ನವನ್ನು 
ಪಡುತ್ತಾರೆ. 
 
ಈ ಪಯಣದಲ್ಲಿ ಎರಡು ಧಾರಾವಾಹಿಗಳ ಕುಟುಂಬದ ಸದಸ್ಯರುಗಳೂ ಕೂಡಾ ಭಾಗವಹಿಸುತ್ತಾರೆ. ಈ ಪಯಣದಲ್ಲಿ ಸಾಕಷ್ಟು ಕುತೂಹಲಕಾರಿ ಘಟನೆಗಳು,ಒಂದಿಷ್ಟು ಮುಚ್ಚಿಟ್ಟ 
ಸಂಗತಿಗಳನ್ನು ಇಲ್ಲಿ ಚಿತ್ರಿಸಲಾಗುವುದು. 
 
ಇಂಥಹ “ಮಹಾಸಂಚಿಕೆ”ಗೆ ಪ್ರಣಯರಾಜಾ “ಶ್ರೀನಾಥ್”ಮತ್ತು “ಪದ್ಮಾವಾಸಂತಿ”ಸಾತ್ ನೀಡುತ್ತಿದ್ದಾರೆ. ಈ ಸೆಲಬ್ರಿಟಿಗಳ ಆಗಮನದಿಂದ ಇವೆರಡು ಧಾರಾವಾಹಿಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments