Webdunia - Bharat's app for daily news and videos

Install App

ಸುಶೀಲ್‌ಕುಮಾರ್ ಭಿಂಗಾ ಆಗಿ ಮಿಂಚುತ್ತಿರುವ ಹನುಮಂತೇಗೌಡ

Webdunia
EVENT
ಕಲಾವಿದ ಹನುಮಂತೇಗೌಡರು ಎಂದರೆ ಬಹಳ ಜನಕ್ಕೆ ಬೇಗ ಅರ್ಥವಾಗುವುದಿಲ್ಲ. ಆದರೆ ಇವರ ಮುಖವನ್ನು ನೋಡಿದಾಕ್ಷಣ, 'ಓ ಇವರಾ ಗೊತ್ತು ಗೊತ್ತುಬಿಡಿ; ಇವರ ಪರಿಚಯದ ಅಗತ್ಯವಿಲ್ಲ' ಎಂದುಬಿಡುತ್ತಾರೆ ನಮ್ಮ ಕಿರುತೆರೆ ವೀಕ್ಷಕರು. ಏಕೆಂದರೆ ಕನ್ನಡದ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಒಂದಲ್ಲಾ ಒಂದು ಪಾತ್ರದಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಹನುಮಂತೇಗೌಡರದ್ದು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಕ್ಲಾಸ್‌ಮೇಟ್ಸ್‌' ಧಾರಾವಾಹಿಯೂ ಸೇರಿದಂತೆ, ಉದಯ, ಈ-ಟಿವಿ ವಾಹಿನಿಗಳ ವೀಕ್ಷಕರಿಗೆ ಹನುಮಂತೇಗೌಡರು ಚಿರಪರಿಚಿತರು. 'ಕ್ಲಾಸ್‌ಮೇಟ್ಸ್‌' ಧಾರಾವಾಹಿಯಲ್ಲಿ ದೇವಾಲಯವೊಂದರ ಧರ್ಮದರ್ಶಿಯ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಆದರೆ ಇವರಿಗೆ ಹೆಚ್ಚಿನ ಹಿರಿಮೆ-ಗರಿಮೆಗಳನ್ನು ತಂದುಕೊಟ್ಟಿದ್ದು 'ಮುಕ್ತ ಮುಕ್ತ' ಧಾರಾವಾಹಿಯ ಸುಶೀಲ್‌ ಕುಮಾರ್ ಭಿಂಗಾ ಪಾತ್ರ ಎನ್ನಬಹುದು.

ಈ ಧಾರಾವಾಹಿಯಲ್ಲಿ ಓರ್ವ ಉದ್ಯಮಿಯಾಗಿ, ಮುಖ್ಯಮಂತ್ರಿಯಾಗಿದ್ದ ರಾಜಾನಂದ ಸ್ವಾಮಿಯವರ ಕೊಲೆಸಂಚಿನಲ್ಲಿ ಪಾಲ್ಗೊಂಡು, ಈಗ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಕುಟಿಲ ರಾಜಕಾರಣಿಯಾಗಿ ಕಾಣಿಸಿಕೊಂಡಿರುವ ಹನುಮಂತೇಗೌಡರು ಪಾತ್ರಕ್ಕೆ ಅಗತ್ಯವಾಗಿರುವ ಸಮಯಸಾಧಕತನ, ಗೋಮುಖ-ವ್ಯಾಘ್ರನ ಸ್ವಭಾವ, ಕುಟಿಲತೆ, ಮೊದಲಾದವುಗಳನ್ನು ಸಮರ್ಥವಾಗಿ ಬಿಂಬಿಸಿದ್ದಾರೆ ಎಂದರೆ ತಪ್ಪಾಗಲಾರದು.

ಧಾರಾವಾಹಿಯಲ್ಲಿ ನ್ಯಾಯಾಲಯದ ದೃಶ್ಯಗಳಿರುವಷ್ಟು ಹೊತ್ತೂ ಟಿ.ಎನ್‌. ಸೀತಾರಾಂರವರ ಕ್ರಾಸ್‌ ಎಗ್ಸಾಮಿನೇಷನ್‌ ದೃಶ್ಯಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆಯೇ, ಹನುಮಂತೇಗೌಡರು ಭಾಗವಹಿಸಿರುವ ದೃಶ್ಯಗಳನ್ನು ನೋಡುವಾಗಲೂ ಕಣ್ಣನ್ನು ಅತ್ತಿತ್ತ ಆಡಿಸಲು ಮನಸ್ಸು ಒಪ್ಪುವುದಿಲ್ಲ. ಏಕೆಂದರೆ ಇವರು ಮಾಡುವ ಸಣ್ಣ ಸಣ್ಣ ಹಾವಭಾವಗಳು ಮತ್ತು ಕಣ್ಣುಗಳ ಚಲನೆಗಳೂ ಸಹ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.

ಅದರಲ್ಲೂ ವಿಶೇಷವಾಗಿ 'ಮುಕ್ತ ಮುಕ್ತ' ಧಾರಾವಾಹಿಯ ಶೀರ್ಷಿಕೆ ಗೀತೆಯಲ್ಲಿನ 'ಹೂ ಮೊಗವಾಡದ ಇರಿಯುವ ಮುಳ್ಳೇ ಎಲ್ಲಿವರೆಗೆ ನಿನ್ನಾಟಾ' ಎಂಬ ಸಾಲುಗಳು ಬರುವಾಗ ಬಹುತೇಕ ನಿದರ್ಶನಗಳಲ್ಲಿ ಇವರ ಮುಖವನ್ನೇ ತೋರಿಸುವುದು ನಿರ್ದೇಶಕ ಸೀತಾರಾಂರವರ ಜಾಣತನಕ್ಕೆ ಮತ್ತು ಈ ಕಲಾವಿದನ ಪ್ರತಿಭೆಗೆ ಹಿಡಿದ ಕನ್ನಡಿ ಎನ್ನಬಹುದೇನೋ?

ಹನುಮಂತೇಗೌಡರು ಇದೇ ರೀತಿಯಲ್ಲಿ ಕಲಾಭಿಮಾನಿಗಳನ್ನು ರಂಜಿಸುತ್ತಿರಲಿ ಎಂದು ಆಶಿಸೋಣ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹಿರಂಗವಾಗಿ ಕಾರಿನಲ್ಲಿ ಸುತ್ತಾಡಿದ ರಶ್ಮಿಕಾ ಮಂದಣ್ಣ–ವಿಜಯ್‌ ದೇವರಗೊಂಡ:ಗುಸುಗುಸು ಸುದ್ದಿಗೆ ಬ್ರೇಕ್‌

ಅಡ್ವಾನ್ಸ್‌ ಪಡೆದು ಶೂಟಿಂಗ್‌ಗೆ ಸತಾಯಿಸಿದ ಆರೋಪ: ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ದೂರು

ದರ್ಶನ್ ಟೆಂಪನ್ ರನ್: ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ವಿಶೇಷ ಪೂಜೆ ಸಲ್ಲಿಕೆ

ರಚಿತಾ ರಾಮ್ ವಿರುದ್ಧ ಫಿಲಂ ಚೇಂಬರ್ ಗೆ ದೂರು: ದುಡ್ಡು ಬಂದ್ರೂ ಹೀಗೆ ಮಾಡಿದ್ರಾ ಬುಲ್ ಬುಲ್

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ವಿತರಕರ ಹಿಂದೇಟು: ರಿಲೀಸ್ ಆದ್ರೂ ನೋಡ್ಬೇಡಿ ಎಂದ ನಟರು

Show comments