Webdunia - Bharat's app for daily news and videos

Install App

'ಕೋಟ್ಯಧಿಪತಿ'ಯಲ್ಲಿ ಅನಿಲ್ ಕುಂಬ್ಳೆ; ಮಿಸ್ ಮಾಡ್ಬೇಡಿ

Webdunia
PR
ಸಿನಿಮಾ ಸೆಲೆಬ್ರಿಟಿಗಳನ್ನಷ್ಟೇ ವಿಶೇಷ ಅತಿಥಿಗಳನ್ನಾಗಿ ಹಾಟ್ ಸೀಟಲ್ಲಿ ನೋಡಿ ಬೋರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ವೀಕ್ಷಕರಿಗೆ ಈ ಬಾರಿ ಅನಿಲ್ ಕುಂಬ್ಳೆ ಗೂಗ್ಲಿಯಿದೆ. ಬುಧವಾರ ಮತ್ತು ಗುರುವಾರ ಎರಡು ದಿನ 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಕುಂಬ್ಳೆ ರಾರಾಜಿಸುತ್ತಿದ್ದಾರೆ.

ಈ ಹಿಂದೆ ರಮ್ಯಾ, ಲಕ್ಷ್ಮಿ, ರವಿಚಂದ್ರನ್‌ರಂತಹ ಸೆಲೆಬ್ರಿಟಿಗಳನ್ನು 'ಕನ್ನಡದ ಕೋಟ್ಯಧಿಪತಿ' ಕಂಡಿತ್ತು. ಎಲ್ಲರೂ ಸಿನಿಮಾದವರೇ. ಆದರೆ ಈಗ ಮೊತ್ತ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರೊಬ್ಬರನ್ನು ಸುವರ್ಣ ಮನರಂಜನಾ ವಾಹಿನಿ ತನ್ನ ಸ್ಟುಡಿಯೋಗೆ ಕರೆಸಿದೆ. ಕನ್ನಡಿಗನ ಬಾಯಲ್ಲಿ ಕನ್ನಡ, ಕ್ರಿಕೆಟ್ ಮತ್ತು ಕೋಟಿ ಕೋಟಿಯ ಮಾತುಗಳನ್ನಾಡಿಸಿದೆ.

ಅನಿಲ್ ಕುಂಬ್ಳೆ ಭಾಗವಹಿಸಿರುವ 'ಕನ್ನಡದ ಕೋಟ್ಯಧಿಪತಿ' ಜೂನ್ 13ರ ಬುಧವಾರ ಮತ್ತು 14ರ ಗುರುವಾರದಂದು ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ.

ಕಾರ್ಯಕ್ರಮದ ಬಿಡುಗಡೆಯಾಗಿರುವ ಟ್ರೇಲರಿನಲ್ಲಿ ಪುನೀತ್‌ಗೆ ಕುಂಬ್ಳೆ ಬೌಲಿಂಗ್ ಟಿಪ್ಸ್ ಕೊಡುತ್ತಿರುವುದು, ಪುನೀತ್ ಜತೆ ಕುಂಬ್ಳೆ ಹಾಡೊಂದಕ್ಕೆ ಹೆಜ್ಜೆ ಹಾಕುವುದು, 'ನಿನ್ನಿಂದಲೇ ನಿನ್ನಿಂದಲೇ...' ಎಂದು ಮಿಲನ ಚಿತ್ರದ ಹಾಡನ್ನು ಕುಂಬ್ಳೆ ಹಾಡುತ್ತಿರುವುದು ಕಂಡು ಬಂದಿದೆ. ಕನ್ನಡ, ಕ್ರಿಕೆಟ್ ಮತ್ತು ಕೋಟಿ ಇಲ್ಲಿ ಒಂದಾಗಿದೆ ಎಂದೂ ಕುಂಬ್ಳೆ ಹೇಳುತ್ತಾರೆ. ಕಾರ್ಯಕ್ರಮದುದ್ದಕ್ಕೂ ಕುಂಬ್ಳೆಯವರು ಅಚ್ಚ ಕನ್ನಡದಲ್ಲೇ ಮಾತನಾಡಿರುವುದು ವಿಶೇಷ.

ಕುಂಬ್ಳೆ ಭಾಗವಹಿಸಿರುವ ಸಂಚಿಕೆ ವಾರದ ಹಿಂದೆಯೇ ಚೆನ್ನೈಯಲ್ಲಿ ಚಿತ್ರೀಕರಣವಾಗಿತ್ತು. ಇದಕ್ಕಾಗಿಯೇ ಕುಂಬ್ಳೆ ಚೆನ್ನೈಯಲ್ಲಿರುವ ಸ್ಟುಡಿಯೋಗೆ ತೆರಳಿದ್ದರು. ಆದರೆ ಎಷ್ಟು ಮೊತ್ತ ಗೆದ್ದಿದ್ದಾರೆ, ಯಾವ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಟ್ಟಿದ್ದಾರೆ ಎನ್ನುವುದು ವಿಶೇಷ ಸಂಚಿಕೆ ಪ್ರಸಾರವಾದ ನಂತರವಷ್ಟೇ ಗೊತ್ತಾಗಬೇಕಿದೆ.

ಇಲ್ಲಿ ಹೇಳಲೇಬೇಕಾದ ವಿಚಾರವೊಂದಿದೆ. ಅದು ಕುಂಬ್ಳೆ ಗೆದ್ದ ಹಣದ ಕುರಿತಾದದ್ದು. ಅವರು ಗೆದ್ದ ಅಷ್ಟೂ ಹಣವನ್ನು ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಕೈಂಕರ್ಯದಲ್ಲಿರುವ ಶಂಕರ್ ಫೌಂಡೇಶನ್‌ಗೆ ದಾನ ಮಾಡಿದ್ದಾರೆ. ಆ ಮೂಲಕ ಈ ಹಿಂದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೆಲೆಬ್ರಿಟಿಗಳ ಹಾದಿಯಲ್ಲೇ ಕುಂಬ್ಳೆ ಕೂಡ ಸಾಗಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹಿರಂಗವಾಗಿ ಕಾರಿನಲ್ಲಿ ಸುತ್ತಾಡಿದ ರಶ್ಮಿಕಾ ಮಂದಣ್ಣ–ವಿಜಯ್‌ ದೇವರಗೊಂಡ:ಗುಸುಗುಸು ಸುದ್ದಿಗೆ ಬ್ರೇಕ್‌

ಅಡ್ವಾನ್ಸ್‌ ಪಡೆದು ಶೂಟಿಂಗ್‌ಗೆ ಸತಾಯಿಸಿದ ಆರೋಪ: ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ದೂರು

ದರ್ಶನ್ ಟೆಂಪನ್ ರನ್: ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ವಿಶೇಷ ಪೂಜೆ ಸಲ್ಲಿಕೆ

ರಚಿತಾ ರಾಮ್ ವಿರುದ್ಧ ಫಿಲಂ ಚೇಂಬರ್ ಗೆ ದೂರು: ದುಡ್ಡು ಬಂದ್ರೂ ಹೀಗೆ ಮಾಡಿದ್ರಾ ಬುಲ್ ಬುಲ್

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ವಿತರಕರ ಹಿಂದೇಟು: ರಿಲೀಸ್ ಆದ್ರೂ ನೋಡ್ಬೇಡಿ ಎಂದ ನಟರು

Show comments