Webdunia - Bharat's app for daily news and videos

Install App

ಕಿಚ್ಚನ ಬಿಗ್ ಬಾಸ್‌ಗೆ ರಾಧಿಕಾ, ಪ್ರಿಯಾಮಣಿ ನೋ ನೋ..!

Webdunia
PR
ಹೌದು, ಈಟಿವಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋವನ್ನು ನಾನೇ ನಡೆಸಿಕೊಡುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿಕೊಂಡಿರುವ ನಡುವೆಯೇ ಅತ್ತ ರಾಧಿಕಾ ಪಂಡಿತ್ ಮತ್ತು ಪ್ರಿಯಾಮಣಿ ನೋ ನೋ ಅಂತ ತಲೆ ಅಡ್ಡಡ್ಡ ಆಡಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಆವೃತ್ತಿಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕ್ರಿಕೆಟಿಗ ರಾಬಿನ್ ಉತ್ತಪ್ಪ, ರಾಧಿಕಾ ಪಂಡಿತ್, ಪ್ರಿಯಾಮಣಿ, ಶ್ರೀಮುರಳಿ ಮುಂತಾದವರಿಗೆ ಆಹ್ವಾನ ನೀಡಲಾಗುತ್ತಿದೆ ಎಂದು ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿತ್ತು. ಅದರಲ್ಲೀಗ ಎರಡು ವಿಕೆಟುಗಳು ಕಳಚಿಕೊಂಡಿವೆ. ರಾಧಿಕಾ ಪಂಡಿತ್ ಮತ್ತು ಪ್ರಿಯಾಮಣಿ ತಾವು ಭಾಗವಹಿಸುವುದಿಲ್ಲ ಎಂದಿದ್ದಾರೆ.

ರಾಧಿಕಾ ಪಂಡಿತ್ ತನ್ನ ಫೇಸ್‌ಬುಕ್ ಪುಟದಲ್ಲಿ ಸಂಕ್ರಾಂತಿ ಮುನ್ನಾದಿನ ಸ್ಪಷ್ಟನೆ ನೀಡಿದ್ದಾರೆ. ( News spreading about me being a part of kannada BIG BOSS is NOT TRUE :-) ಅಭಿಮಾನಿಗಳಿಗೆ ಮಕರ ಸಂಕ್ರಾಂತಿ ಶುಭಾಶಯ ಹೇಳುತ್ತಲೇ, ಕನ್ನಡ ಬಿಗ್‌ಬಾಸ್‌ನಲ್ಲಿ ನಾನು ಭಾಗವಹಿಸುತ್ತಿದ್ದೇನೆ ಎಂಬುದು ನಿಜವಲ್ಲ ಎಂದಿದ್ದಾರೆ.

ಅತ್ತ ಪ್ರಿಯಾಮಣಿ ಕೂಡ ಇದೇ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡದ ಬಿಗ್ ಬಾಸ್‌ ಮನೆಗೆ ನಾನು ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇವೆಲ್ಲದರ ನಡುವೆ ಸುದೀಪ್, ತಾನೇ ಬಿಗ್ ಬಾಸ್ ನಡೆಸಿಕೊಡುತ್ತಿದ್ದೇನೆ ಎಂದು ಮೊದಲ ಬಾರಿ ತಿಳಿಸಿದ್ದಾರೆ.

ಜನಶ್ರೀ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸುದೀಪ್, ನನಗೆ ಕಿರುತೆರೆ ಹೊಸದಲ್ಲ. ಈ ಹಿಂದೆ ಪ್ಯಾಟೆ ಹುಡ್ಗೀರ ಹಳ್ಳಿ ಲೈಫು ಕಾರ್ಯಕ್ರಮ ಮಾಡಿದ್ದೆ. ಈಗ ಇನ್ನೊಂದು ರಿಯಾಲಿಟಿ ಶೋಟ ನಡೆಸಿಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಸದ್ಯ ಬಚ್ಚನ್ ಚಿತ್ರದಲ್ಲಿ ಬ್ಯುಸಿಯಾಗಿರುವ ಸುದೀಪ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಮೆಂಟ್ ನಂತರ 'ಬಿಗ್ ಬಾಸ್' ಕನ್ನಡದತ್ತ ಗಮನ ಹರಿಸಲಿದ್ದಾರೆ. ಅದಕ್ಕೂ ಮೊದಲು ಈ ಕಾರ್ಯಕ್ರಮವನ್ನು ಹಿಂದಿಯಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲಿದ್ದಾರಂತೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹಿರಂಗವಾಗಿ ಕಾರಿನಲ್ಲಿ ಸುತ್ತಾಡಿದ ರಶ್ಮಿಕಾ ಮಂದಣ್ಣ–ವಿಜಯ್‌ ದೇವರಗೊಂಡ:ಗುಸುಗುಸು ಸುದ್ದಿಗೆ ಬ್ರೇಕ್‌

ಅಡ್ವಾನ್ಸ್‌ ಪಡೆದು ಶೂಟಿಂಗ್‌ಗೆ ಸತಾಯಿಸಿದ ಆರೋಪ: ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ದೂರು

ದರ್ಶನ್ ಟೆಂಪನ್ ರನ್: ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ವಿಶೇಷ ಪೂಜೆ ಸಲ್ಲಿಕೆ

ರಚಿತಾ ರಾಮ್ ವಿರುದ್ಧ ಫಿಲಂ ಚೇಂಬರ್ ಗೆ ದೂರು: ದುಡ್ಡು ಬಂದ್ರೂ ಹೀಗೆ ಮಾಡಿದ್ರಾ ಬುಲ್ ಬುಲ್

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ವಿತರಕರ ಹಿಂದೇಟು: ರಿಲೀಸ್ ಆದ್ರೂ ನೋಡ್ಬೇಡಿ ಎಂದ ನಟರು

Show comments