ಮೀರ್ಪುರ್: ಬಾಂಗ್ಲಾದಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಯಾವುದೇ ಪಂದ್ಯದಲ್ಲಿ ಸೋಲು ಕಾಣದೆ 6 ನೇ ಬಾರಿಗೆ ಏಷ್ಯಾ ಕಪ್ ಎತ್ತಿ ಹಿಡಿದು ಸಂಭ್ರಮಿಸಿದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಮಾರ್ಚ್ 8 ರಿಂದ ಪ್ರಾರಂಭವಾಗುವ ವಿಶ್ವ ಟಿ20 ಪಂದ್ಯಾವಳಿಗೆ ತಂಡ ಸಜ್ಜಾಗಿದೆ ಎಂದು ಹೇಳಿದ್ದಾರೆ.
ಬಾಂಗ್ಲಾ ತಂಡ ನೀಡಿದ್ದ 121 ರನ್ಗಳ ಗುರಿಯನ್ನು ಭಾರತ ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ತಲುಪಿ 8 ವಿಕೆಟ್ಗಳ ಜಯ ಸಾಧಿಸಿತು.
ತಂಡದ ನಾಯಕ ಧೋನಿ, ಅಮೀನ್ ಹುಸೇನ್ ಎಸೆದ ಬೌಲ್ನಲ್ಲಿ ಸಿಕ್ಸ್ ಬಾರಿಸಿ ಪಂದ್ಯ ಮುಗಿಸಿದರು. ನಂತರ ಮಾತನಾಡಿದ ಧೋನಿ ಅಗ್ರ ಕ್ರಮಾಂಕದ ಬ್ಯಾಟ್ಸಮೆನ್ಗಳ ಭವ್ಯವಾದ ಪ್ರದರ್ಶನದಿಂದ ತಂಡ ಸುಲಭವಾಗಿ ಗುರಿ ತಲುಪಲು ನೆರವಾಯಿತು ಎಂದು ಹೇಳಿದರು.
ಬಾಂಗ್ಲಾದೇಶದ ವಿರುದ್ಧ ಗೆದ್ಧ ಭಾರತ, ಆರನೇಯ ಬಾರಿ ಏಷ್ಯಾ ಕಪ್ ತನ್ನದಾಗಿಸಿಕೊಂಡಿದೆ.
ಅಗ್ರ ಸ್ಥಾನದಲ್ಲಿರುವ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಿದ್ದು, ಮತ್ತು ನಂತರ ಬಂದ ಬ್ಯಾಟ್ಸ್ಮನ್ಗಳು ಅದನ್ನು ಮುಂದುವರೆಸಿಕೊಂಡು ಹೋದರು. ಮುಂಬರುವ ವಿಶ್ವ ಟಿ20 ಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಮರ್ಥರಾಗಿದ್ದೇವೆ ಎಂದು ತಿಳಿಸಿದ್ದಾರೆ.
ವೇಗದ ಬೌಲರ್ ಬುಮ್ರಾ ಮತ್ತು ಯುವ ಆಲ್ರೌಂಡರ್ ಹಾರ್ದಿಕ ಪಾಂಡ್ಯಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆಂದು ಧೋನಿ ಹೇಳಿದ್ದಾರೆ.