Webdunia - Bharat's app for daily news and videos

Install App

ನಿಧಾರಗತಿಯ ಓವರ್-ರೇಟ್; ಲಂಕಾಕ್ಕೆ ಐಸಿಸಿ ದಂಡ

Webdunia
ಶನಿವಾರ, 20 ಜೂನ್ 2009 (12:20 IST)
ವೆಸ್ಟ್‌ಇಂಡೀಸ್ ವಿರುದ್ಧ 57 ರನ್ನುಗಳ ಅಂತರದಿಂದ ಓವಲ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್ ಗೆದ್ದ ಶ್ರೀಲಂಕಾ ತಂಡಕ್ಕೆ ನಿಧಾನಗತಿಯ ಓವರ್-ರೇಟ್ ಕಾರಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ದಂಡ ವಿಧಿಸಿದೆ.

ಕುಮಾರ ಸಂಗಕ್ಕರ ಪಡೆಯು ವೆಸ್ಟ್‌ಇಂಡೀಸ್‌ಗೆ ಬೌಲಿಂಗ್ ಮಾಡಿ ಪಂದ್ಯ ಮುಗಿಯುವ ಹೊತ್ತಿನಲ್ಲಿ ಒಂದು ಓವರ್‌ನಷ್ಟು ಅವಧಿ ನಿಧಾನವಾಗಿತ್ತು ಎಂದು ಆಸ್ಟ್ರೇಲಿಯನ್ ಮ್ಯಾಚ್ ರೆಫ್ರಿ ಆಲನ್ ಹಾರ್ಸ್ಟ್‌ರವರು ಐಸಿಸಿ ಗಮನಕ್ಕೆ ತಂದಿದ್ದರು.

ಐಸಿಸಿ ನಡವಳಿಕೆ ನಿಯಮಾವಳಿ ಪ್ರಕಾರ ನಿಗದಿತ ಸಮಯದಲ್ಲಿ ಪ್ರತೀ ಓವರ್ ಮುಗಿಸಲಾಗದ ತಂಡದ ಪ್ರತೀ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇಕಡಾ ಐದು ಮತ್ತು ನಾಯಕನಿಗೆ ಎರಡು ಪಟ್ಟು ದಂಡ ವಿಧಿಸಿರುವ ನಿರ್ಧಾರವನ್ನು ಶನಿವಾರ ಐಸಿಸಿ ಪ್ರಕಟಿಸಿದೆ.

ಅದರಂತೆ ನಾಯಕ ಕುಮಾರ ಸಂಗಕ್ಕರ ತನ್ನ ಈ ಪಂದ್ಯದ ಸಂಭಾವನೆಯಲ್ಲಿ ಶೇಕಡಾ 10ನ್ನು ಕಳೆದುಕೊಂಡಿದ್ದಾರೆ. ಅವರ ತಂಡದ ಉಳಿದ ಆಟಗಾರರ ಸಂಭಾವನೆಯಲ್ಲಿ ಶೇಕಡಾ ಐದು ಕಡಿತವಾಗಿದೆ.

ವೆಸ್ಟ್‌ಇಂಡೀಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಐದು ವಿಕೆಟ್ ನಷ್ಟಕ್ಕೆ 158 ರನ್ ದಾಖಲಿಸಿತ್ತು. ಇದರಲ್ಲಿ ಪ್ರಮುಖ ಮೊತ್ತ ದಾಖಲಿಸಿದ್ದು ತಿಲಕರತ್ನೆ ದಿಲ್‌ಶಾನ್. ಅವರು ಅಮೋಘ ಬ್ಯಾಟಿಂಗ್ ಮೂಲಕ ಅಜೇಯ 96 ರನ್ ದಾಖಲಿಸಿದ್ದರು. ಆದರೆ ವೆಸ್ಟ್‌ಇಂಡೀಸ್ ಇನ್ನೂ 14 ಎಸೆತಗಳು ಬಾಕಿ ಉಳಿದಿರುವಾಗಲೇ 101ಕ್ಕೆ ಸರ್ವಪತನ ಕಂಡಿತ್ತು.

ವೇಗದ ಬೌಲರ್ ಅಂಜೆಲೋ ಮ್ಯಾಥ್ಯೂಸ್ ವೆಸ್ಟ್ಇಂಡೀಸ್ ಆರಂಭಿಕ ಮೂರು ವಿಕೆಟುಗಳನ್ನು ಕಿತ್ತಿದ್ದರು. ಒಟ್ಟಾರೆ ಮೂರು ವಿಕೆಟ್ ಪಡೆದ ಅವರು ನೀಡಿದ ರನ್ 16 ಮಾತ್ರ.

ಫೈನಲ್ ಪ್ರವೇಶಿಸಿರುವ ಶ್ರೀಲಂಕಾವು ತನ್ನ ಏಷಿಯಾ ಎದುರಾಳಿ ಪಾಕಿಸ್ತಾನವನ್ನು ಲಾರ್ಡ್ಸ್‌ನಲ್ಲಿ ಭಾನುವಾರ ಎದುರಿಸಲಿದೆ. ಪಾಕಿಸ್ತಾನವು ಕಪ್ ಗೆಲ್ಲುವ ನೆಚ್ಚಿನ ತಂಡ ದಕ್ಷಿಣ ಆಫ್ರಿಕಾವನ್ನು 7 ವಿಕೆಟುಗಳಿಂದ ಮಣಿಸುವ ಮೂಲಕ ಗುರುವಾರ ಮೊದಲ ಸೆಮಿಫೈನಲ್ ಯಶಸ್ವಿಯಾಗಿ ಮುಗಿಸಿತ್ತು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs PBKS:ಆರ್‌ಸಿಬಿ ಆಟಗಾರರ ಬ್ಯಾಟಿಂಗ್‌ ಬಗ್ಗೆ ವೀರೇಂದ್ರ ಸೆಹ್ವಾಗ್ ಟೀಕೆ

IPL 2025 RCB: ಮೊದಲು ಕಪ್ ಗೆಲ್ತಾ ಇರಲಿಲ್ಲ, ಈಗ ಚಿನ್ನಸ್ವಾಮಿಯಲ್ಲೇ ಗೆಲ್ತಾ ಇಲ್ಲ

IPL 2025: ಎಲ್ಲಾ ಚೆನ್ನಾಗಿತ್ತು, ಕೊಹ್ಲಿ ಒಂದು ಸಲಹೆ ಕೊಟ್ಟಿದ್ದೇ ಕೊಟ್ಟಿದ್ದು, ಎಡವಟ್ಟಾಯ್ತು: ವಿಡಿಯೋ

IPL 2025: ಚಿನ್ನಸ್ವಾಮಿಯಲ್ಲಿ ಕಿಂಗ್ಸ್‌ ದರ್ಬಾರ್‌: ತವರಿನಲ್ಲಿ ಆರ್‌ಸಿಬಿಗೆ ಹ್ಯಾಟ್ರಿಕ್‌ ಸೋಲಿನ ಮುಖಭಂಗ

ಬಿಡುವು ನೀಡಿದ ಮಳೆರಾಯ, RCB vs PBKS ಪಂದ್ಯಾಟ ಶುರು

Show comments