Webdunia - Bharat's app for daily news and videos

Install App

ಸಾಕ್ಷಿಗೆ ಬಹುಮಾನ ನೀಡಲು ಡಬ್ಲ್ಯುಎಫ್‌ಐ ಬಳಿ ಹಣವಿಲ್ಲ

Webdunia
ಶನಿವಾರ, 27 ಆಗಸ್ಟ್ 2016 (15:23 IST)
ಹರ್ಯಾಣ ಸರ್ಕಾರ ಮತ್ತು ಇತರೆ ಸಂಘಟನೆಗಳು ರಿಯೊದಲ್ಲಿ ಕಂಚು ಗೆದ್ದ ಸಾಕ್ಷಿ ಮಲಿಕ್ ಅವರಿಗೆ ಬಹುಮಾನಗಳ ಮಳೆಗರೆದಿರಬಹುದು. ಆದರೆ ಸಾಕ್ಷಿ ಮಾತೃ ಸಂಸ್ಥೆ ಭಾರತ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಎ) ದಿಂದ ಸಾಕ್ಷಿಗೆ ಬೆನ್ನು ತಟ್ಟಿ ಶಹಭಾಷ್‌‍ಗಿರಿ ನೀಡಿದ್ದು ಬಿಟ್ಟರೆ ಬೇರೆ ಏನನ್ನೂ ನಿರೀಕ್ಷೆ ಮಾಡುವಂತಿರಲಿಲ್ಲ.

ರಾಜ್ಯ ಸರ್ಕಾರವು ಮಲಿಕ್‌ಗೆ 2.5 ಕೋಟಿ ನಗದು ಬಹಮಾನ ನೀಡಿ ಸನ್ಮಾನಿಸಿತು. ಆದರೆ ಸಾಕ್ಷಿಯ ಐತಿಹಾಸಿಕ ಸಾಧನೆಗಾಗಿ ಅವರಿಗೆ ಬಹುಮಾನ ನೀಡಲು ತಮ್ಮಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ ಎಂದು ಹಣದ ಮುಗ್ಗಟ್ಟಿಗೆ ಸಿಕ್ಕಿದ ಡಬ್ಲ್ಯುಎಫ್‌ಐ ತಿಳಿಸಿದೆ.
 
ಉತ್ತರಪ್ರದೇಶದ ಗೊಂಡಾದಿಂದ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸಾಕ್ಷಿಗೆ ಬಹುಮಾನ ನೀಡಲು ನಮ್ಮ ಬಳಿ ಹಣವಿಲ್ಲ ಎಂದು ನೇರವಾಗಿ ಹೇಳಿದರು. ಇದರಿಂದ ಒಕ್ಕೂಟದ ಸ್ಥಿತಿಗತಿಯ ಬಗ್ಗೆ ಆಘಾತಕಾರಿ ಅಂಶ ಬಹಿರಂಗವಾಗಿದೆ. ಇದಕ್ಕೆ ವಿರುದ್ಧವಾಗಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆ ರಿಯೊ ಬೆಳ್ಳಿಪದಕ ವಿಜೇತ ಪಿವಿ ಸಿಂಧುಗೆ50 ಲಕ್ಷ ಬಹುಮಾನ ಘೋಷಿಸಿದೆ. ಗೊಂಡಾದ ಬಿಜೆಪಿ ಸಂಸದ ಸಿಂಗ್ ಕುಸ್ತಿ ಕ್ರೀಡೆಗೆ ಹಣಕಾಸಿನ ಬೆಂಬಲದ ಕೊರತೆಯಿದೆ ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments