ಹಾವಿನ ರಕ್ತ ಕುಡಿಯುವುದಾಗಿ ಹೇಳಿಕೊಂಡಿದ್ದ ಅಲೆಕ್ಸಾಂಡರ್ ಹೋರ್ವಾತ್ ಲಿವರ್ಪೂಲ್ ಅಖಾಡದಲ್ಲಿ ನಡೆದ ವೃತ್ತಿಪರ ಬಾಕ್ಸಿಂಗ್ನಲ್ಲಿ ಭಾರತದ ವಿಜೇಂದರ್ ಸಿಂಗ್ಗೆ ಸೋತು ಶರಣಾಗಿದ್ದಾರೆ. ತಾನು ಅಸಾಮಾನ್ಯ ಶಕ್ತಿ ಪಡೆಯಲು ಹಾವಿನ ರಕ್ತ ಕುಡಿಯುವುದಾಗಿಯೂ ಮತ್ತು 5 ಬೌಟ್ಗಳನ್ನು ಗೆದ್ದಿರುವ ತನಗೆ ವಿಜೇಂದರ್ ಸರಿಸಾಟಿಯಲ್ಲ ಎಂದಿದ್ದರು. ವಿಜೇಂದರ್ ತನ್ನನ್ನು ಸೋಲಿಸಲು ಸಾಧ್ಯವೆ ಇಲ್ಲ. ಅವರಿಗೆ ಬಾಕ್ಸಿಂಗ್ ಪಾಠ ಕಲಿಸುತ್ತೇನೆ ಎಂದು ಅಲೆಕ್ಸಾಂಡರ್ ಕೊಚ್ಚಿಕೊಂಡಿದ್ದರು.
ಆದರೆ ವಿಜೇಂದರ್ ವೃತ್ತಿಪರ ಅಖಾಡಾದಲ್ಲಿ ಹೋರ್ವಾತ್ ವಿರುದ್ಧ ಸುಲಭ ಗೆಲುವು ಸಾಧಿಸುವ ಮೂಲಕ ಮಣ್ಣುಮುಕ್ಕಿಸಿದರು. ಹಿಂದಿನ ಹೋರಾಟದ ರೀತಿಯಲ್ಲಿ ವಿಜೇಂದರ್ ಮೇಲುಗೈ ಸಾಧಿಸಿದರು. ಮೂರನೇ ಸುತ್ತಿನಲ್ಲಿ ವಿಜೇಂದರ್ ಹೋರ್ವಾತ್ ಎಡ ಭುಜಕ್ಕೆ ಶಕ್ತಿಶಾಲಿ ಪಂಚ್ ಮಾಡಿದ್ದರಿಂದ ಕೇವಲ ಒಂದು ನಿಮಿಷದಲ್ಲೇ ಹೋರ್ವಾತ್ ಕಾದಾಟ ನಿಲ್ಲಿಸಿದರು.
75 ಕೆಜಿ ಮಿಡಲ್ ವೇಟ್ ವಿಭಾಗದಲ್ಲಿ ಇದು ವಿಜೇಂದರ್ ಅವರ ಸತತ ನಾಲ್ಕನೇ ಜಯವಾಗಿದೆ. ಆರಂಭದಲ್ಲಿ ಹೋರ್ವಾತ್ ಆಕ್ರಮಣಕಾರಿಯಾಗಿ ಕಂಡುಬಂದರು. ಮೊದಲ ಸುತ್ತಿನಲ್ಲಿ ಎದುರಾಳಿ ಕಾರ್ಯತಂತ್ರವನ್ನು ಅಳೆದ ವಿಜೇಂದರ್ ಹೋರ್ವಾತ್ ಪಂಚ್ಗಳಿಗೆ ತಲೆಬಗ್ಗಿಸಿ ತಪ್ಪಿಸಿಕೊಂಡು ತಮ್ಮ ಶಕ್ತಿಶಾಲಿ ಪಂಚ್ಗಳ ರುಚಿ ತೋರಿಸಿದ್ದರು. ಹೋರ್ವಾತ್ ಹೆಚ್ಚು ತುರ್ತನ್ನು ತೋರಿಸಿದರೂ, ವಿಜೇಂದರ್ ರಕ್ಷಣೆ ಮುರಿಯಲು ವಿಫಲರಾದರು.