ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಪಡೆದ ಪಿ.ವಿ.ಸಿಂಧು ಸಾಧನೆ ನೋಡಿ ಉಗಿಬೇಕು ಎನ್ನಿಸಿದೆ ಎಂದು ಮಲೆಯಾಳಂ ಖ್ಯಾತ ಚಿತ್ರ ನಿರ್ದೇಶಕ ಸನಾಲ್ ಕುಮಾರ್ ಸಸಿಧರನ್ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಮಾಡಿದ ಪೋಸ್ಟ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಭಾರತ ದೇಶವೇ ಸಿಂಧು ಸಾಧನೆಯನ್ನು ಹೊಗಳುತ್ತಿದ್ದರೆ ನಿರ್ದೇಶಕ ಸನಾಲ್ ಕುಮಾರ್, ಫೇಸ್ಬುಕ್ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿ, ಪ್ರತಿಯೊಬ್ಬರು ಸಿಂಧು ಸಾಧನೆಯ ಬಗ್ಗೆ ಸಂಭ್ರಮ ಆಚರಿಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಸಂಭ್ರಮ ಆಚರಿಸುತ್ತಿದ್ದಾರೆ? ನನಗಂತೂ ಆಕೆಯ ಸಾಧನೆ ನೋಡಿ ಉಗಿಬೇಕು ಅನ್ನಿಸಿದೆ ಎಂದು ಬರೆದಿದ್ದಾನೆ.
ಮಲೆಯಾಳಂ ಚಿತ್ರದ ನಿರ್ದೇಶಕ ಸನಾಲ್ ಕುಮಾರ್ ಪೋಸ್ಟ್ ನೋಡಿದ ಸಿಂಧು ಅಭಿಮಾನಿಗಳು ಆತನ ವಿರುದ್ಧ ಮನಬಂದಂತೆ ಟೀಕ್ರಾಪ್ರಹಾರ ನಡೆಸಿದ್ದಾರೆ.
ಸಾಮಾಜಿಕ ಅಂತರ್ಜಾಲ ತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾದ ನಂತರ ಯೂ-ಟರ್ನ್ ಹೊಡೆದ ಸನಾಲ್ ಕುಮಾರ್, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೆ ನೀಡಿದ್ದಾನೆ.
ಗಮನಾರ್ಹ ವಿಷಯವೆಂದರೆ, ರಿಯೋ ಒಲಿಂಪಿಕ್ಸ್ನ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಕರೋಲಿನಾ ಮರಿನ್ ವಿರುದ್ಧ ಸೋಲನುಭವಿಸಿದ ಸಿಂಧು, ಬೆಳ್ಳಿ ಪದಕ ಪಡೆದ ಮೊದಲ ಏಕೈಕ ಭಾರತೀಯಳು ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
ಪಿ.ವಿ.ಸಿಂಧು ಹೈದ್ರಾಬಾದ್ ನಗರಕ್ಕೆ ಆಗಮಿಸುತ್ತಿದ್ದಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರಕಾರಗಳು ಭಾರಿ ಸ್ವಾಗತ ಕೋರಿ ಸಂಭ್ರಮವನ್ನು ಆಚರಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ