Webdunia - Bharat's app for daily news and videos

Install App

ಕಂಚಿನ ಪದಕ ನಿರಾಕರಿಸಿದ ಸರಿತಾದೇವಿಗೆ ನಿಷೇಧದ ಶಿಕ್ಷೆ

Webdunia
ಬುಧವಾರ, 22 ಅಕ್ಟೋಬರ್ 2014 (12:32 IST)
ಇಂಚಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ರೆಫರಿ ನಿರ್ಧಾರ ಪ್ರತಿಭಟಿಸಿ, ಕಂಚಿನ ಪದಕ ನಿರಾಕರಿಸಿದ್ದ ಬಾಕ್ಸರ್ ಸರಿತಾ ದೇವಿಗೆ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ ಈ ನಿಷೇಧ ಹೇರಿ ತೀರ್ಪು ನೀಡಿದೆ.

ತಮಗಾಗಿರುವ ಅನ್ಯಾಯವನ್ನು ಪ್ರಶ್ನಿಸಿದ ಸರಿತಾ ದೇವಿ ವೇದಿಕೆಯಲ್ಲಿ ಪದಕ ನೀಡುವಾಗ ಕಣ್ಣೀರು ಸುರಿಸಿದ್ದರು. ಕಂಚಿನ ಪದಕವನ್ನು ಕೊರಳಿಗೆ ಕೂಡ ಹಾಕಿಕೊಳ್ಳದೇ ಕೈಯಲ್ಲಿ ಹಿಡಿದಿದ್ದರು. ಅದಾದ ನಂತರ ಕಂಚಿನ ಪದಕವನ್ನು ವಾಪಸ್ ಮಾಡುವ ಮೂಲಕ ರೆಫರಿ ನಿರ್ಧಾರವನ್ನು ಪ್ರಶ್ನಿಸಿದ್ದರು. ಸರಿತಾದೇವಿ ಅವರ ಕೋಚ್ ಸಂಧುವನ್ನು ಕೂಡ ಕ್ರೀಡಾಕೂಟದಿಂದ ನಿಷೇಧಿಸಲಾಗಿದೆ. 
ಸರಿತಾದೇವಿಯ ನಡುವಳಿಕೆಯನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ ಗಂಭೀರವಾಗಿ ಪರಿಗಣಿಸಿತ್ತು. ಏಕೆಂದರೆ ಸರಿತಾದೇವಿ ಪದಕ ನಿರಾಕರಿಸಿದ್ದರಿಂದ ತೀವ್ರ ವಿವಾದ ಹುಟ್ಟು ಹಾಕಿತ್ತು. ಸರಿತಾ ದೇವಿಗೆ ಅನ್ಯಾಯವಾಗಿದೆ ಎಂದು ಅನೇಕ ಭಾರತೀಯರು ಕೂಗೆಬ್ಬಿಸಿದ್ದರು. ಆದರೆ ರೆಫರಿಯ ತೀರ್ಮಾನವೇ ಅಂತಿಮವಾದ್ದರಿಂದ ಆ ನಿರ್ಧಾರವನ್ನು ಪ್ರಶ್ನಿಸಿ ಪ್ರತಿಭಟನೆ ಸೂಚಿಸಿದ ಸರಿತಾದೇವಿಯ ವರ್ತನೆಯನ್ನು ಖಂಡಿಸಿದ ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ ಈಗ ನಿಷೇಧದ ಶಿಕ್ಷೆಯನ್ನು ವಿಧಿಸಿದೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments