ರಿಯೊ ಒಲಿಂಪಿಕ್ಸ್ ಕುಸ್ತಿ ಪಟು ಯೋಗೇಶ್ವರ್ ದತ್ ತಮ್ಮ ಅರ್ಹತಾ ಸುತ್ತಿನಲ್ಲಿ ಸೋಲಪ್ಪಿದ ಬಳಿಕ, ಸಾಮಾಜಿಕ ಜಾಲ ತಾಣ ಟ್ವಿಟರ್ನಲ್ಲಿ ಸಲ್ಮಾನ್ ಖಾನ್ ಫ್ಯಾನ್ಗಳು ಅಣಕವಾಡಿದ್ದಾರೆ. ಯೋಗೇಶ್ವರ್ ದತ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ಕಳೆದಿದ್ದರಿಂದ ಅರ್ಹತಾ ಸುತ್ತಿನಲ್ಲೇ ಸೋತರೆಂದು ಗೇಲಿ ಮಾಡಿದ್ದಾರೆ.
ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ರಿಯೊ ತಂಡಕ್ಕೆ ಸದ್ಭಾವನಾ ರಾಯಭಾರಿಯಾಗಿ ನೇಮಿಸಿದ ಬಳಿಕ ಯೋಗಿ ಟ್ವಿಟರ್ ಪೋಸ್ಟ್ನಲ್ಲಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದರಿಂದ ಸಲ್ಮಾನ್ ಅಭಿಮಾನಿಗಳು ಬೇಸರಗೊಂಡಿದ್ದರು.
ಯೋಗೇಶ್ವರ್ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಪಂದ್ಯದ ಅರ್ಹತಾ ಸುತ್ತಿನಲ್ಲೇ ಮಂಗೋಲಿಯಾದ ಗಾಂಜೊರಿಜಿನ್ ಮಂದಕ್ನಾರನ್ ಅವರಿಗೆ ಸೋತಿದ್ದರು. ಯೋಗೇಶ್ವರ್ ಟ್ವಿಟರ್ನಲ್ಲಿ ಕಾಲಕಳೆದಿದ್ದರಿಂದ ಸೋತಿದ್ದಾರೆಂದು ಸಲ್ಮಾನ್ ಫ್ಯಾನ್ಗಳು ಟೀಕಿಸಿದರು.
ಆದಾಗ್ಯೂ ಯೋಗಿ ತಮ್ಮನ್ನು ಅಣಕವಾಡಿದ ಎಲ್ಲರಿಗೂ ತಕ್ಕ ಉತ್ತರ ನೀಡಿದ್ದಾರೆ. ಫೇಸ್ಬುಕ್ನಲ್ಲಿ ವಿಡಿಯೊ ಶೇರ್ ಮಾಡಿದ ಯೋಗೇಶ್ವರ್ ತಮ್ಮ ಅಭಿಮಾನಿಗಳಿಗೆ ಕ್ಷಮೆಯಾಚಿಸಿದರು. ಅದರ ಬೆನ್ನಲ್ಲೇ ತಮಗೆ ಅವಮಾನಕರ ಟ್ವೀಟ್ಮಾಡಿದವರ ವಿರುದ್ಧ ಕಠಿಣ ಪದಗಳನ್ನು ಪ್ರಯೋಗಿಸಿದರು.