Webdunia - Bharat's app for daily news and videos

Install App

ನಿಜ ಜೀವನದಲ್ಲೂ ಹೀರೋ ಆದ ಒಲಿಂಪಿಯನ್ ಕೃಷ್ಣ ಪೂನಿಯಾ

Webdunia
ಮಂಗಳವಾರ, 3 ಜನವರಿ 2017 (14:07 IST)
ರಾಜಸ್ಥಾನ್: ಅಥ್ಲಿಟ್ ಗಳೆಂದರೆ ಮೈದಾನದಲ್ಲಿ ಮಾತ್ರ ಹೀರೋಯಿಸಂ ತೋರಿಸಲು ಲಾಯಕ್ಕು ಎನ್ನುವವರಿಗೆ ಇಲ್ಲಿದೆ ನೋಡಿ ನಿಜ ಜೀವನದಲ್ಲೂ ಹೀರೋ ಆದ ಅಥ್ಲಿಟ್ ಕತೆ.  ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ, ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಡಿಸ್ಕಸ್ ಥ್ರೋ ಆಟಗಾರ್ತಿ ಕೃಷ್ಣ ಪೂನಿಯಾ ಹೆಣ್ಣು ಮಕ್ಕಳನ್ನು ರಕ್ಷಿಸಿದ ಕತೆ.


ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಘಟನೆಯಿದು. ಪೂನಿಯಾ ತಮ್ಮ ಕಾರಿನಲ್ಲಿ, ಪ್ರಯಾಣಿಸುತ್ತಿದ್ದಾಗ ರೈಲ್ವೇ ಕ್ರಾಸಿಂಗ್ ಬಳಿ ಅಳುತ್ತಾ ನಿಂತಿದ್ದ ಹುಡುಗಿಯರ ಗುಂಪು ಕಾಣಿಸಿತು. ಕಾರು ನಿಲ್ಲಿಸಿ ಅವರನ್ನು ವಿಚಾರಿಸಿದಾಗ ಯುವಕರ ಗುಂಪೊಂದು ಅವರಿಗೆ ಕಿರುಕುಳ ನೀಡುತ್ತಿರುವುದು ತಿಳಿಯಿತು.

ಅವರಲ್ಲೊಬ್ಬ ಈ ಹುಡುಗಿಯರಿಗೆ ಹೊಡೆದಿದ್ದನೆಂದೂ ತಿಳಿದು ಬಂತು. ಕೂಡಲೇ ಪೂನಿಯಾ ಆ ಯುವಕರ ಗುಂಪಿನತ್ತ ಧಾವಿಸಿದಾಗ, ಅವರು ಕಾಲ್ಕಿತ್ತರು. ಆದರೆ ಪೂನಿಯಾ ಸುಮ್ಮನೆ ಬಿಡಲಿಲ್ಲ. ಅವರ ಹಿಂದೆಯೇ ಓಡಿ ಒಬ್ಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಸಫಲರಾಗಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಹಲವು ಜನ ದೌಡಾಯಿಸಿದ್ದಾರೆ. ಅಲ್ಲದೆ, ಹುಡುಗಿಯರ ಸಹೋದರ ಪೊಲೀಸರಿಗೆ ಘಟನೆ ಬಗ್ಗೆ ದೂರು ನೀಡಿದ್ದಾನೆ. ಅಂತೂ ನೂರಾರು ಜನರ ಮಧ್ಯೆ ಪೂನಿಯಾ ಮಗ್ಧ ಬಾಲಕಿಯರ ರಕ್ಷಿಸಿದ ಹೆಮ್ಮೆಯಿಂದ ಬೀಗಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿ ಬೇಡ ಎಂದಿದ್ದಕ್ಕೆ ನಿಜ ಕಾರಣ ತಿಳಿಸಿದ ಜಸ್ಪ್ರೀತ್ ಬುಮ್ರಾ

ICC ODI Rankings:No.1 ಬ್ಯಾಟರ್ ಪಟ್ಟಕೇರಿದ ಸ್ಮೃತಿ ಮಂಧಾನ

Virat Kohli: ಲಂಡನ್ ನಲ್ಲಿ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿಯಿಂದ ಸ್ಪೆಷಲ್ ಸರ್ಪೈಸ್

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

ಮುಂದಿನ ಸುದ್ದಿ
Show comments