Webdunia - Bharat's app for daily news and videos

Install App

ನರಸಿಂಗ್ ಯಾದವ್ ವಿವಾದ: ನಿರ್ಧಾರ ತಡೆಹಿಡಿದ ನಾಡಾ

Webdunia
ಶುಕ್ರವಾರ, 29 ಜುಲೈ 2016 (10:30 IST)
ಕುಸ್ತಿಪಟು ನರಸಿಂಗ್ ರಾವ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಇನ್ನೂ ಖಚಿತವಾಗಿಲ್ಲ. ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಸಂಸ್ಥೆ(ನಾಡಾ)ಯ ಎರಡು ದಿನಗಳ ವಿಚಾರಣೆ ನವದೆಹಲಿಯಲ್ಲಿ ಗುರುವಾರ ಮುಕ್ತಾಯವಾದ ಬಳಿಕ ಅಂತಿಮ ನಿರ್ಧಾರವನ್ನು ಮುಂದೂಡಿದ್ದು, ಶನಿವಾರ ಅಥವಾ ಸೋಮವಾರ ಪ್ರಕಟಿಸಲಾಗುತ್ತದೆ.
 
74 ಕೆಜಿ ಫ್ರೀಸ್ಟೈಲ್ ಕುಸ್ತಿಪಟು ಮತ್ತು ಅವರ ವಕೀಲರು ವಿಫಲಗೊಂಡ ಉದ್ದೀಪನ ಮದ್ದು ಸೇವನೆ ಪರೀಕ್ಷೆ ಕುರಿತು ತಮ್ಮ ವಾದವನ್ನು ಮಂಡಿಸಿ ಇದೊಂದು ಪಿತೂರಿ ಎಂದು ಪ್ರತಿಪಾದಿಸಿದ್ದರು. ನಾಡಾದ ಕಾನೂನು ಸಮಿತಿಯು ಪಿತೂರಿ ಸಿದ್ಧಾಂತದ ವಿರುದ್ಧ ತನ್ನ ವಾದಗಳನ್ನು ಶಿಸ್ತು ಸಮಿತಿಯ ಮುಂದೆ ಇರಿಸಿದೆ.
 
 ವಿಚಾರಣೆ ಗುರುವಾರ ಮುಗಿದಿದ್ದು, ತೀರ್ಪ ಶನಿವಾರ ಅಥವಾ ಸೋಮವಾರ ಹೊರಬೀಳಲಿದೆ ಎಂದು ನಾಡಾ ವಕೀಲ ಗೌರಂಗ್ ಕಾಂತ್ ತಿಳಿಸಿದರು.
 
 ನರಸಿಂಗ್ ಪ್ರತಿಪಾದಿಸಿರುವ ಒಳಸಂಚಿನ ಬಗ್ಗೆ ಯಾವುದೇ ಸಾಂದರ್ಭಿಕ ಸಾಕ್ಷ್ಯವನ್ನು ಹಾಜರುಪಡಿಸಿಲ್ಲ ಎಂದು ನಾಡಾ ಹೇಳಿದೆ.
ಅವರ ಪಾನೀಯ ಅಥವಾ ನೀರಿಗೆ ಮದ್ದನ್ನು ಬೆರೆಸಲಾಗಿದೆ ಎಂದು ಅವರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ ನಾಡಾ ಮತ್ತು ವಾಡಾಗೆ ತೃಪ್ತಿಯಾಗುವ ರೀತಿಯಲ್ಲಿ ಅವರು ಸಾಕ್ಷ್ಯಾಧಾರ ಹಾಜರುಪಡಿಸಿಲ್ಲ ಎಂದು ಗೌರವ್ ಕಾಂತ್ ತಿಳಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್

ಆಂಗ್ಲರ ನಾಡಲ್ಲಿ ಮತ್ತೇ ಅಬ್ಬರಿಸಿದ ಶುಭ್ಮನ್‌ ಗಿಲ್ ಬ್ಯಾಟಿಂಗ್‌: 8ನೇ ಶತಕ ಸಿಡಿಸಿದ ಕ್ಯಾಪ್ಟನ್‌

IND vs ENG Test: ವಿದೇಶಿ ನೆಲದಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments