Webdunia - Bharat's app for daily news and videos

Install App

ಅರ್ಜುನ್ ಪ್ರಶಸ್ತಿ ನೀಡದೇ ಕಡೆಗಣಿಸಿದ ಕಪಿಲ್‌ದೇವ್‌ಗೆ ಮನೋಜ್ ತರಾಟೆ

Webdunia
ಬುಧವಾರ, 26 ನವೆಂಬರ್ 2014 (19:54 IST)
ಭಾರತದ ಬಾಕ್ಸರ್ ಮನೋಜ್ ಕುಮಾರ್  ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ಕಪಿಲ್ ದೇವ್ ತಮಗೆ ಬೆಂಬಲ ನೀಡದಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. ಮನೋಜ್ ಇಂದು ಕ್ರೀಡಾ ಸಚಿವ ಸರ್ಬಾನಂದ ಸೋನೋವಾಲ್ ಅವರಿಂದ ಪ್ರತಿಷ್ಠಿತ ಅರ್ಜುನಾ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ತಮ್ಮನ್ನು ಪ್ರಶಸ್ತಿ ಸಮಿತಿ ಇದಕ್ಕೆ ಮುಂಚೆ ಕಡೆಗಣಿಸಿದ್ದರ ಬಗ್ಗೆ ಬೇಸರದಿಂದ ಮಾತನಾಡಿದರು.

ನನ್ನ ಕೆಲಸ ಬಾಕ್ಸಿಂಗ್ ಆಡುವುದು. ನನ್ನ ಸಾಧನೆಗಳ ಪ್ರಕಾರ, ನಾನು ಪ್ರಶಸ್ತಿಗೆ ಅರ್ಹತೆ ಪಡೆದಿದ್ದರೂ ಸಮಿತಿ ಕಡೆಗಣಿಸಿತು. ನನ್ನ ವಿರುದ್ಧ ನಿಷೇದಿತ ಮದ್ದು ಸೇವನೆಯ ಸುಳ್ಳು ಆರೋಪ ಮಾಡಿದ್ದು ಯಾರೆಂದು ಗೊತ್ತಿಲ್ಲ ಎಂದು ನುಡಿದರು.
 
ತಮ್ಮ ಸಂದೇಶವನ್ನು ಮುಟ್ಟಿಸುವುದಕ್ಕೆ ಕಪಿಲ್‌ಗೆ ಕರೆ ಮಾಡಿದಾಗ ಅವರು ಫೋನ್ ಸಂಪರ್ಕ ಕಟ್ ಮಾಡಿದರು.ನಾನು ಕಪಿಲ್‌ಗೆ ಕರೆ ಮಾಡಿ ನಾನು ಬಾಕ್ಸರ್ ಮನೋಜ್. ಸಿಡಬ್ಲ್ಯುಜಿನಲ್ಲಿ ಚಿನ್ನದ ಪದಕ ಗೆದ್ದಿದ್ದೇನೆ.
ಅರ್ಜುನ ಪ್ರಶಸ್ತಿ ಪಟ್ಟಿಯಿಂದ ನನ್ನ ಹೆಸರು ತೆಗೆದು ಕಂಚಿನ ಪದಕ ಗೆದ್ದವರಿಗೆ ಪದಕ ಕೊಡುತ್ತಿದ್ದೀರಿ ಎಂದು ಹೇಳಿದಾಗ ಅವರು ನನಗೆ ಅವೆಲ್ಲಾ ಮಾತನಾಡಲು ಇಷ್ಟವಿಲ್ಲ ಎಂದು ಕಪಿಲ್ ಹೇಳಿ ಫೋನ್ ಕಟ್ ಮಾಡಿದ್ದಾರೆಂದು ತಿಳಿಸಿದರು.
 
ಕಪಿಲ್ ದೇವ್ ಆಯ್ಕೆ ಸಮಿತಿ ಮನೋಜ್ ಅವರಿಗೆ ಅರ್ಜುನ್ ಪ್ರಶಸ್ತಿ ನೀಡದೇ ಕಡೆಗಣಿಸಿ ಬಾಕ್ಸರ್ ಜೈಭಗವಾನ್ ಅವರಿಗೆ ಪ್ರಶಸ್ತಿ ನೀಡಲು ಶಿಫಾರಸು ಮಾಡಿದ್ದರು.
ಪುನರ್ಪರಿಶೀಲನಾ ಭೇಟಿಯಲ್ಲಿ ಕೂಡ ಮನೋಜ್ ಹೆಸರು ಸೇರ್ಪಡೆಯಾಗದೇ ದೆಹಲಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಅವರು ಅದರಲ್ಲಿ ಗೆದ್ದಾಗ ಸಚಿವಾಲಯ ಪ್ರಶಸ್ತಿಗೆ ಅವರ ಹೆಸರನ್ನು ಆಯ್ಕೆ ಮಾಡಿತು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments