ಕಂಬಳ ಸ್ಟಾರ್ ಶ್ರೀನಿವಾಸ್ ಗೌಡ ಸಾಯ್ ನಲ್ಲಿ ತರಬೇತಿ ಪಡೆಯಲ್ಲ ಎಂದಿದ್ಯಾಕೆ ಗೊತ್ತಾ?

Webdunia
ಮಂಗಳವಾರ, 18 ಫೆಬ್ರವರಿ 2020 (09:58 IST)
ಬೆಂಗಳೂರು: ಕಂಬಳ ಓಟದಲ್ಲಿ ವೇಗವಾಗಿ ಓಡಿ ವಿಶ್ವವಿಖ್ಯಾತ ಉಸೇನ್ ಬೋಲ್ಟ್ ರನ್ನೇ ಮೀರಿಸಿದ ಮೂಡಬಿದಿರೆಯ ಶ್ರೀನಿವಾಸ್ ಗೌಡ ಸಾಯ್ ನಲ್ಲಿ ತರಬೇತಿ ಪಡೆಯಲು ನಿರಾಕರಿಸಿದ್ದು ಯಾಕೆ ಗೊತ್ತಾ?


ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶಿಫಾರಸ್ಸಿನ ಮೇರೆಗೆ ಶ್ರೀನಿವಾಸ್ ಗೌಡ ಅವರಿಗೆ ಬೆಂಗಳೂರಿನ ಕ್ರೀಡಾ ತರಬೇತಿ ಕೇಂದ್ರ ಸಾಯ್ ನಲ್ಲಿ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಬೆಂಗಳೂರಿಗೆ ಬರಲು ಅವರಿಗೆ ರೈಲ್ವೇ ಟಿಕೆಟ್ ಕೂಡಾ ಬುಕ್ ಮಾಡಲಾಗಿತ್ತು.

ಆದರೆ ಶ್ರೀನಿವಾಸ್ ಗೌಡ ಈ ಆಫರ್ ನಿರಾಕರಿಸಿ ಶಾಕ್ ನೀಡಿದ್ದರು. ಇದಕ್ಕೆ ಅವರು ನೀಡಿರುವ ಕಾರಣವೇನು ಗೊತ್ತಾ? ‘ಸರ್ಕಾರ ನನ್ನನ್ನು ಗುರುತಿಸಿವುದು ಸಂತಸ ತಂದಿದೆ. ಯಜಮಾನರು ಅಷ್ಟು ವೇಗವಾಗಿ ಓಡುವಂತೆ ಕೋಣಗಳನ್ನು ಸಾಕಿದ್ದರಿಂದ ನನಗೆ ವೇಗವಾಗಿ ಓಡಲು ಸಾಧ‍್ಯವಾಯಿತು. ಇನ್ನೂ ಈ ರೀತಿ ಓಡಬಲ್ಲೆ. 12 ಓಟಗಳ ಸ್ಪರ್ಧೆಯಿಂದ ನನಗೆ 35 ಪದಕ ಸಿಕ್ಕಿದೆ. ಇನ್ನೂ ಮೂರ್ನಾಲ್ಕು ಕಂಬಳ ಇದೆ. ಅದೆಲ್ಲಾ ಮುಗಿದ ಮೇಲೆ ತರಬೇತಿಗೆ ಹಾಜರಾಗುವೆ’ ಎಂದು ಕಂಬಳ ಸ್ಟಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ಸ್ವತಃ ಸಿಎಂ ಯಡಿಯೂರಪ್ಪ 3 ಲಕ್ಷ ರೂ.ಗಳ ಚೆಕ್ ನೀಡಿ ಶ್ರೀನಿವಾಸ್ ಗೌಡರಿಗೆ ಸನ್ಮಾನ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

ಮುಂದಿನ ಸುದ್ದಿ
Show comments