Webdunia - Bharat's app for daily news and videos

Install App

ಕಿರಿಯರ ವಿಶ್ವಕಪ್ ಹಾಕಿ ಗೆದ್ದ ತಂಡಕ್ಕೆ ಉದ್ಯೋಗ ಬೇಕಂತೆ!

Webdunia
ಭಾನುವಾರ, 25 ಡಿಸೆಂಬರ್ 2016 (10:54 IST)
ನವದೆಹಲಿ: ಕ್ರಿಕೆಟ್, ಟೆನಿಸ್, ಬ್ಯಾಡ್ಮಿಂಟನ್ ಬಿಟ್ಟರೆ ನಮ್ಮ ದೇಶದಲ್ಲಿ ಯಾವ ಕ್ರೀಡಾ ಪಟುಗಳು ಶ್ರೀಮಂತರಲ್ಲ.  ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗಷ್ಟೇ ಕಿರಿಯರ ವಿಶ್ವಕಪ್ ಹಾಕಿ ಗೆದ್ದು ಸಾಧನೆ ಮಾಡಿದ ಭಾರತದ ಹುಡುಗರು ಈಗ ಉದ್ಯೋಗ ಕೇಳಲು ಮುಂದಾಗಿದ್ದಾರೆ.


ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿರುವ ಚಾಂಪಿಯನ್ ತಂಡ ತಮಗೆಲ್ಲರಿಗೂ ಉದ್ಯೋಗ ಕೊಡಿಸುವಂತೆ ಕೇಳಿಕೊಳ್ಳಲಿದ್ದಾರೆ. ಚಾಂಪಿಯನ್ ಆಗಿದ್ದಕ್ಕೆ ಪಂಜಾಬ್ ಸರ್ಕಾರ ನಮಗೆ 25 ಲಕ್ಷ ರೂ. ಬಹುಮಾನ ನೀಡಿದೆ. ಆದರೆ ಇದು ಸಾಲದು. ನಮಗೆ ಉದ್ಯೋಗ ಭದ್ರತೆ ಬೇಕು ಎಂಬುದು ಹಾಕಿ ಪಟುಗಳ ಕೋರಿಕೆ.

“ನಮಗೆ ಉದ್ಯೋಗವಿಲ್ಲ. ಒಂದು ವೇಳೆ ಗಂಭೀರ ಗಾಯಗೊಂಡರೆ ನಮ್ಮ ಖರ್ಚು ನೋಡಿಕೊಳ್ಳುವವರು ಯಾರು? ನಮಗೆ ಉದ್ಯೋಗ ಭದ್ರತೆ ಬೇಕು. ಅದಕ್ಕಾಗಿ ಡಿಸೆಂಬರ್ 28 ರಂದು ಪ್ರಧಾನಿಯವರನ್ನು ಭೇಟಿ ಮಾಡುವಾಗ ಉದ್ಯೋಗ ಕೊಡಿಸಲು ಮನವಿ ಮಾಡುತ್ತೇವೆ” ಎಂದು ಹಾಕಿ ಆಟಗಾರ ಸಮರಜಿತ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments