Webdunia - Bharat's app for daily news and videos

Install App

ಓದಿನಲ್ಲಿ ಜಾಣನಾಗಿರದಿದ್ದುದೇ ನನ್ನ ಅದೃಷ್ಟ: ಗೋಪಿಚಂದ್

Webdunia
ಗುರುವಾರ, 1 ಸೆಪ್ಟಂಬರ್ 2016 (11:47 IST)
ತಾವು ಓದಿನಲ್ಲಿ ಬುದ್ಧವಂತನಾಗಿರದಿದ್ದುದೇ ನನ್ನ ದೊಡ್ಡ ಅದೃಷ್ಟ ಎಂದು ಖ್ಯಾತ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಹೇಳಿದ್ದಾರೆ.

ಕ್ರೀಡೆ ಬದ್ಧತೆ ಮತ್ತು ತ್ಯಾಗವನ್ನು ಅಪೇಕ್ಷಿಸುತ್ತದೆ ಮತ್ತು ಕೆಲವೊಮ್ಮೆ ಅದೃಷ್ಟ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಬಗ್ಗೆ ಚರ್ಚಿಸುತ್ತಿದ್ದ ಅವರು, ನಾನು ಮತ್ತು ಅಣ್ಣ ಇಬ್ಬರು ಕ್ರೀಡೆಯಲ್ಲಿ ಮುಂದಿದ್ದೆವು. ಆತ ಓದಿನಲ್ಲೂ ಜಾಣನಾಗಿದ್ದ. ಆದರೆ ನನಗೆ ಓದು ತಲೆಗೆ ಹತ್ತುತ್ತಿರಲಿಲ್ಲ. ಇದೇ ನನಗೆ ಅದೃಷ್ಟವಾಯಿತು. ಐಐಟಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೇ ನಾನು ಯಶಸ್ವಿ ಕ್ರೀಡಾಪಟುವಾಗಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
 
ಅಣ್ಣ ರಾಜ್ಯ ಮಟ್ಟದಲ್ಲಿ ಚಾಂಪಿಯನ್ ಆಗಿದ್ದ. ಐಐಟಿ ಪರೀಕ್ಷೆ ಬರೆದಿದ್ದ ಆದ ತೇರ್ಗಡೆಯಾದ. ಹೀಗಾಗಿ ಐಐಟಿ ಸೇರಿದ ಆತ ಆಟವನ್ನು ನಿಲ್ಲಿಸಿದ. ನಾನು ಕೂಡ ಎಂಜಿನಿಯರಿಂಗ್ ಪರೀಕ್ಷೆ ಬರೆದು ಫೇಲಾದೆ. ಹೀಗಾಗಿ ಕ್ರೀಡೆಯಲ್ಲಿ ಮುಂದುವರೆದೆ. ಈಗ ನಾನು ಎಲ್ಲಿ ನಿಂತಿದ್ದೇನೆ ನೋಡಿ. ನನ್ನ ಮಟ್ಟಿಗೆ ಹೇಳುವುದಾದರೆ ನಮಗೆ ಬದ್ಧತೆ ಇರಬೇಕು ಮತ್ತು ಕೆಲವೊಮ್ಮೆ ಅದೃಷ್ಟ ಕೂಡ ಇರಬೇಕು ಎಂದು ನಗುತ್ತಾರೆ 42ರ ಗೋಪಿಚಂದ್. 
 
ಆಲ್ ಇಂಗ್ಲೆಂಡ್ ಟೂರ್ನಿ ಗೆದ್ದಿರುವ ಎರಡೇ ಕ್ರೀಡಾಪಟುಗಳಲ್ಲಿ ಗೋಪಿಚಂದ್ ಕೂಡ ಒಬ್ಬರು. 2001ರಲ್ಲಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡದ್ದ ಅವರು ಕೆಲ ದಿನಗಳಲ್ಲಿಯೇ ನಿವೃತ್ತಿ ಪಡೆದು ಸ್ವಂತ ಅಕಾಡೆಮಿಯನ್ನು ಪ್ರಾರಂಭಿಸಿದ್ದರು. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Doha Diamond League: ಜಾವೆಲಿನ್‌ ಥ್ರೋನಲ್ಲಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ: ಹಳೆಯ ದಾಖಲೆಗಳು ಉಡೀಸ್‌

IPL 2025: ಪಂದ್ಯ ಪುನರ್‌ ಆರಂಭಗೊಳ್ಳುತ್ತಿದ್ದ ಹಾಗೇ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

Rohit Sharma:ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಗಾಟಿಸಿದ ವಿಶೇಷ ವ್ಯಕ್ತಿಗಳು ಯಾರು ವಿಡಿಯೋ ನೋಡಿ

Pakistan, India: ಭಾರತ-ಪಾಕ್ ನಡುವಿನ ಉದ್ವಿಗ್ನತೆಯಿಂದಾಗಿ ಬಾಂಗ್ಲಾದೇಶದ ಪಾಕಿಸ್ತಾನ ಪ್ರವಾಸ ರದ್ದಾಗುವ ಸಾಧ್ಯತೆ

IPL 2025: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿಮ್ ಡೇವಿಡ್ ನೀರಾಟ, Video Viral

ಮುಂದಿನ ಸುದ್ದಿ
Show comments