Webdunia - Bharat's app for daily news and videos

Install App

ದಿನಗೂಲಿ ನೌಕರನ ಮಗ ದೇಶಕ್ಕೆ ತಂದ ಕಂಚಿನ ಪದಕ

Webdunia
ಭಾನುವಾರ, 27 ಜುಲೈ 2014 (16:27 IST)
ದಿನಗೂಲಿ ನೌಕರ ಚಂದ್ರಕಾಂತ ಮಾಳಿಗೆ ಅವರ ಮಗ ಗಣೇಶ, ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಅಪ್ರತಿಮ ಸಾಧನೆ ಮಾಡಿದ್ದಾನೆ.

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 20 ನೇ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಚಂದ್ರಕಾಂತನ ಮಗ ಗಣೇಶ ಕಂಚಿನ ಪದಕ ಗಳಿಸುವ ಮೂಲಕ ಅಪೂರ್ವ ಸಾಧನೆಗೈದು ರಾಷ್ಟ್ರಕ್ಕೆ ಕೀರ್ತೀ ತಂದಿದ್ದಾನೆ. ಈ ಸುದ್ದಿ ತಿಳಿದ ತಂದೆ ಚಂದ್ರಕಾಂತ ಮಾಳಿಗೆ ಆದ ಸಂತಸ ಅಷ್ಟಿಷ್ಟಲ್ಲ. ರಾತ್ರಿಪೂರ್ತಿ ನಿದ್ದೆಗೆಟ್ಟು ಮಗನ ಸಾಧನೆಯ ಕುರಿತ ಹೆಮ್ಮೆಯಿಂದ ಬೀಗುತ್ತಿದ್ದರವರು.
 
ಬೆಳಗಿನ ಜಾವ 1-30 ನಿಮಿಷ. ಗಣೇಶ ಕಂಚಿನ ಪದಕ ಪಡೆದ ಎಂಬುದು ತಿಳಿಯುತ್ತಿದ್ದಂತೆಯೇ ಟಿವಿ ಮುಂದೆ ಕುಳಿತಿದ್ದ ನೋಡುತ್ತ ಕುಳಿತ್ತಿದ್ದ ಚಂದ್ರಕಾಂತ ಕಣಿದು ಕುಪ್ಪಳಿಸಿದ್ದರು. ಕಣ್ಣಿಂದ ಆನಂದ ಭಾಷ್ಪ ಸುರಿದವು. ಕುಂಟುಂಬದ ಸದಸ್ಯರು ಈ ಸಂತಸದ ಕ್ಷಣದಲ್ಲಿ ಪಾಲ್ಗೊಂಡಿದ್ದರು. 
 
ಬಡತನದಲ್ಲಿಯೂ ಕ್ರೀಡೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಗಣೇಶ್, ಭಾರ ಎತ್ತುವ ಸ್ಪರ್ಧೆಯ 56 ಕೆಜಿ. ವಿಭಾಗದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆಯುವ ಮೂಲಕ ಇಡೀ ರಾಷ್ಟ್ರವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ.
 
`ನನ್ನ ಸಂತಸಕ್ಕೆ ಇಂದು ಪಾರವೇ ಇಲ್ಲ. ನನ್ನ ಮಗ ಗಣೇಶ ರಾಷ್ಟ್ರಕ್ಕಾಗಿ ಆಡಿ ಕಂಚನ ಪದಕ ಗೆದ್ದಿದ್ದಾನೆ. ಆತ ಕಠಿಣ ಪರಿಶ್ರಮಿಯಾಗಿದ್ದು, ಅದಕ್ಕೆ ದೊರೆತ ಫಲ ಇದಾಗಿದೆ. ಆತ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುದು ನಮ್ಮ ಆಸೆ' ಎಂದು ಹೇಳುವಾಗ ಅವರಪ್ಪನ ಕಣ್ಣುಗಳಲ್ಲಿ ಅಭಿಮಾನದ ಮಿಂಚು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments