ಸ್ನೂಕರ್: ಪಂಕಜ್ ಆಡ್ವಾಣಿ, ಆದಿತ್ಯ ಮೆಹತಾಗೆ ನಿರಾಸೆ
, ಮಂಗಳವಾರ, 11 ಫೆಬ್ರವರಿ 2014 (16:06 IST)
ಭಾರತದ ಅಗ್ರ ಶ್ರೇಣಿಯ ಸ್ನೂಕರ್ ಆಟಗಾರ ಪಂಕಜ್ ಆಡ್ವಾಣಿ ಮತ್ತು ಆದಿತ್ಯ ಮೆಹತಾ ಪೋಲೆಂಡ್ನಲ್ಲಿ ನಡೆದ ಗಡಾನಿಯಾ ಓಪನ್ನಲ್ಲಿ 5ನೇ ಸುತ್ತಿನಲ್ಲಿ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಸತತ 8 ಬಾರಿ ವಿಶ್ವ ಚಾಂಪಿಯನ್ ಬೆಂಗಳೂರಿನ ಅಡ್ವಾಣಿ ಸಿಂಗಲ್ಸ್ನಲ್ಲಿ 4-2 ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಮತ್ತೊಂದು ಸ್ಪರ್ಧೆಯಲ್ಲಿ,ಮೆಹತಾರವರವರನ್ನು ಟಾಮ್ ಫೋರ್ 4-1 ಅಂತರದಿಂದ ಸೋಲಿಸಿದ್ದಾರೆ . ಭಾರತದ ಅಗ್ರ ಶ್ರೇಣಿಯ ವೃತ್ತಿಪರ ಸ್ನೂಕರ್ ಆಟಗಾರ ಅಡ್ವಾಣಿ, ಬೋರ್ಗ್ ವಿರುದ್ದದ ಪಂದ್ಯದಲ್ಲಿ ಎರಡನೇ ಮತ್ತು ಐದನೇ ಫ್ರೇಮ್ನಲ್ಲಿ ಗೆಲುವನ್ನು ಸಾಧಿಸಿದರೆ ಎದುರಾಳಿ ಮೊದಲ, ಮೂರನೇ ಮತ್ತು ನಾಲ್ಕನೇ ಮತ್ತು ಆರನೇ ಫ್ರೇಮ್ನಲ್ಲಿ ಗೋಲು ಗಳಿಸಿದರು . ಇತರ ಪಂದ್ಯಗಳಲ್ಲಿ ಇಂಡಿಯನ್ ಓಪನ್ ಫೈನಲ್ನಲ್ಲಿ ಸ್ಥಾನ ಪಡೆದ ಮೆಹತಾಗೆ ಯಾವುದೇ ಗೆಲುವಿನ ಅವಕಾಶ ನೀಡದೇ ಟಾಮ್ ಫೋರ್ಡ್ ಸುಲಭವಾಗಿ ಜಯಗಳಿಸಿದರು.