ಸಿಂಗಾಪುರ ಓಪನ್: ಸೆಮಿಫೈನಲ್ ತಲುಪಿದ ಶ್ರೀಕಾಂತ್
ಸಿಂಗಾಪುರ್ , ಮಂಗಳವಾರ, 15 ಏಪ್ರಿಲ್ 2014 (17:05 IST)
ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪಂದ್ಯಾವಳಿಯಲ್ಲಿ ಶ್ರೀಕಾಂತ್ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಆದರೆ ಪುರುಷ ಸಿಂಗಲ್ಸ್ನಲ್ಲಿ ಸಾಯಿ ಪ್ರಣಿತ ಮತ್ತು ಮಹಿಳಾ ಸಿಂಗಲ್ಸ್ನಲ್ಲಿ ಪಿವಿ ಸಿಂಧು ಕ್ವಾರ್ಟರ್ ಫೈನಲ್ನಲ್ಲಿ ಸೋಲನ್ನು ಅನುಭವಿಸಿದ್ದಾರೆ. ಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ 25 ನೇ ಶ್ರೇಯಾಂಕಿತ ಶ್ರೀಕಾಂತ ತನ್ನ ಎದುರಾಳಿಯಾದ ವಿಶ್ವದ 14 ನೇ ಶ್ರೇಯಾಂಕಿತ ಹಾಂಗಕಾಂಗ್ನ ಯುನ್ ಹು ರನ್ನು 17-21, 21-14, 21-19 ಸೆಟ್ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ಗೆ ಪ್ರವೇಶ ಪಡೆದಿದ್ದಾರೆ. ಮುಂದಿನ ಪಂದ್ಯದಲ್ಲಿ ಶ್ರೀಕಾಂತರವರು ವಿಶ್ವದ ಅಗ್ರ ಶ್ರೇಣಿಯ ಮಲೇಷಿಯಾದ ಚೊಂಗ್ ವೈ ಲಿ ವಿರುದ್ದ ಸೆಣಸಾಡಲಿದ್ದಾರೆ. ಲೀ ರವರು ಥೈಲ್ಯಾಂಡ್ನ ಥಾನೊಂಗಾಸಲ್ರನ್ನು 21-8, 21-14 ಅಂತರದಿಂದ ಸೋಲಿಸಿದ್ದರು.