ಕೆನರಾ ಬ್ಯಾಂಕ್ನ ಅಖಿಲ ಭಾರತೀಯ ಹಿರಿಯ ಶ್ರೇಣಿಯ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಪ್ರವೇಶ ಪಂದ್ಯದ ಮಹಿಳಾ ಸಿಂಗಲ್ಸ್ನಲ್ಲಿ ಅರುಂಧತಿ ಪಂಟಾವನೆಯವರಿಂದ ಅಶ್ವಿನಿ ಪೊನ್ನಪ್ಪಾ ಸೋಲನ್ನು ಅನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.
ಅಗ್ರ ಶ್ರೇಯಾಂಕಿತೆ ಅಶ್ವಿನಿ, ಎದುರಾಳಿಯಾದ ಅರುಂಧತಿ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ ಕೂಡ 19-21, 18-21 ಅಂತರದಿಂದ ಸೋಲಿಗೆ ಶರಣಾಗಿದ್ದಾರೆ.
ಅರುಂದತಿಯ ಹೊರತು ಇತರ ಅಗ್ರಶ್ರೇಣಿಯ ರಿತುಪರ್ಣಾ ದಾಸ್ , ತನವಿ ಲೈಡ್ , ಸಯಾಲಿ ಗೊಖಲೆ , ಸೈಲಿ ರಾಣೆ , ನೇಹಾ ಪಂಡಿತ್ ಮತ್ತು ಮುದ್ರಾ ಧಂಜೆ ಕೂಡ ಸೋತು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ಅಗ್ರ ಶ್ರೇಣಿಯ ಸೌರಭ್ ವರ್ಮಾ ತಮ್ಮ ಎದುರಾಳಿಯಾದ ಡೆನಿಎಲೊ ಫರೀದ್ ವಿರುದ್ದ 21-8, 21-19 ಸೆಟ್ಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ .