Select Your Language

Notifications

webdunia
webdunia
webdunia
webdunia

ಧಾರವಾಡ, ಬೆಂಗಳೂರು ತಂಡಗಳಿಗೆ ಜಯ

ಧಾರವಾಡ, ಬೆಂಗಳೂರು ತಂಡಗಳಿಗೆ ಜಯ
ಮಂಗಳೂರು , ಗುರುವಾರ, 23 ಮೇ 2013 (13:02 IST)
PR
PR
ಪಿ. ಜಯರಾಮ್ ಶೆಟ್ಟಿ ಸ್ಮಾರಕ ಅಂತರ್ ಜಿಲ್ಲಾ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಧಾರವಾಡ ಮತ್ತು ಬೆಂಗಳೂರು ತಂಡ ಜಯ ಗಳಿಸಿವೆ.

ಧಾರವಾಡ ತಂಡ ಮಂಡ್ಯ ವಿರುದ್ಧ 7-1 ಅಂತರದಿಂದ ಜಯ ಗಳಿಸಿದೆ. ಧಾರವಾಡದ ಚಂದ್ರಕಾಂತ್- 3, ಆಂಟನಿ -2, ಗಿರೀಶ್ ಹಾಗೂ ಸಿದ್ದಾರ್ಥ್ ತಲಾ ಒಂದು ಗೋಲು ಗಳಿಸಿದರು.

ಮಂಡ್ಯದ ಪ್ರತಿಕ್ ದೇವ್ ಒಂದು ಗೋಲು ಜಮೆ ಮಾಡಿದರು. ಬೆಂಗಳೂರು ತಂಡ 3-0 ಅಂತರದಲ್ಲಿ ಕೊಡಗು ತಂಡವನ್ನು ಸೋಲಿಸಿತು. ಅನೋಶ್, ವಿವೇಕಾನಂದ, ಮನಿವೇನನ್ ತಲಾ ಒಂದು ಗೋಲು ಬಾರಿಸಿ ಬೆಂಗಳೂರು ತಂಡಕ್ಕೆ ಜಯ ತಂದು ಕೊಟ್ಟರು.

Share this Story:

Follow Webdunia kannada