Select Your Language

Notifications

webdunia
webdunia
webdunia
webdunia

ಡೇವಿಸ್ ಕಪ್: ಗಾಯಗಳಿಂದಾಗಿ ಪೇಸ್-ಭೂಪತಿ ಅಲಭ್ಯ

ಡೇವಿಸ್ ಕಪ್: ಗಾಯಗಳಿಂದಾಗಿ ಪೇಸ್-ಭೂಪತಿ ಅಲಭ್ಯ
ನವದೆಹಲಿ , ಗುರುವಾರ, 3 ಮಾರ್ಚ್ 2011 (11:41 IST)
PTI
ವಿಶ್ವಗುಂಪಿನ ಡೇವಿಸ್ ಕಪ್ ಪಂದ್ಯಾವಳಿಯ ಸೆರ್ಬಿಯಾದ ವಿರುದ್ಧ ಪಂದ್ಯದಲ್ಲಿ, ಭಾರತ ತಂಡದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಗಾಯಗಳಿಂದಾಗಿ ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ ಎಂದು ಆಯೋಜಕ ಮೂಲಗಳು ತಿಳಿಸಿವೆ.

ಲಿಯಾಂಡರ್ ಪೇಸ್ ಮುಂಗೈನೋವಿನಿಂದ ಬಳಲುತ್ತಿದ್ದು, ಭೂಪತಿ ಕೂಡಾ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಭೂಪತಿ-ಪೇಸ್ ಸ್ಥಾನಕ್ಕೆ ಕರಣ್ ರಸ್ತೋಗಿ ಮತ್ತು ಯೂಕಿ ಭಾಂಭ್ರಿಯವರನ್ನು ಆಯ್ಕೆ ಮಾಡಲಾಗಿದೆ.

ಇದಕ್ಕಿಂತ ಮೊದಲು, ರಸ್ತೋಗಿ ಮತ್ತು ವಿಷ್ಣುವರ್ಧನ್ ಅವರನ್ನು ತಂಡದಲ್ಲಿ ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದು ಅಖಿಲ್ ಭಾರತ ಟೆನಿಸ್ ಫೆಡರೇಶನ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸೆರ್ಬಿಯಾ ವಿರುದ್ಧದ ಮೊದಲ ಸುತ್ತಿನ ಪಂದ್ಯ ಶುಕ್ರವಾರದಂದು ಸೆರ್ಬಿಯನ್ ನಗರದ ನೊವಿ ಸಾಡ್‌ನಲ್ಲಿ ನಡೆಯಲಿದೆ.

ಭಾರತದ ಸಿಂಗಲ್ಸ್ ವಿಭಾಗದ ಆಶಾಕಿರಣವಾದ ಸೋಮದೇವ್ ದೇವವರ್ಮನ್, ಡಬಲ್ಸ್ ಸ್ಪೆಶಿಯಾಲಿಸ್ಟ್ ರೋಹಣ್ ಬೋಪಣ್ಣಾ ಈಗಾಗಲೇ ಸೆರ್ಬಿಯಾ ತಲುಪಿದ್ದಾರೆ. ಯೂಕಿ ಭಾಂಭ್ರಿ ನೊವಿ ಸಾಡ್‌ಗೆ ಇಂದು ತೆರಳಲಿದ್ದಾರೆ ಎಂದು ಆಯೋಜಕ ಮೂಲಗಳು ತಿಳಿಸಿವೆ.

Share this Story:

Follow Webdunia kannada