ಕ್ಯೂಬಾದ ಹವಾನಾದಲ್ಲಿ ನಡೆಯುತ್ತಿರುವ ಗಿರಾಲ್ಡೊ ಕೊರ್ಡೊವಾ ಕಾರ್ಡಿನ್ ಮೆಮೋರಿಯಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ, ಭಾರತದ ನಾಲ್ವರು ಭಾಕ್ಸರ್ಗಳು ಆರಂಭಿಕ ಸುತ್ತಿನಲ್ಲಿ ಜಯಗಳಿಸಿ ಶುಭಾರಂಭ ಮಾಡಿದ್ದಾರೆ.
ಸಂತೋಷ್ ಹರಿಜನ್ (52ಕೆಜಿ), ಕುಲದೀಪ್ ಸಿಂಗ್(75ಕೆಜಿ), ಮನ್ಪ್ರೀತ್ ಸಿಂಗ್ (91ಕೆಜಿ), ಪರಮ್ಜಿತ್ ಸಮೋಟಾ (+91ಕೆಜಿ) ವಿಭಾಗದ ಮೊದಲ ಸುತ್ತಿನಲ್ಲಿ ಜಯಗಳಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಸಂತೋಷ್,ಸ್ಥಳೀಯ ಎದುರಾಳಿ ಬಾಕ್ಸರ್ ಒರ್ಲಾಂಡಿ ವಿರುದ್ಧ ಮೊದಲ ಎರಡು ಹಂತದಲ್ಲಿ 2-3 ಮತ್ತು 6-7ರಿಂದ ಹಿನ್ನಡೆ ಅನುಭವಿಸಿದರೂ ಮೂರನೇ ಸುತ್ತಿನಲ್ಲಿ ತಿರುಗೇಟು ನೀಡಿ ಅಂತಿಮವಾಗಿ 15-10 ಪಾಯಿಂಟ್ಗಳಿಂದ ಜಯಗಳಿಸುವಲ್ಲಿ ಯಶಸ್ವಿಯಾದರು.
ಇತ್ತೀಚೆಗೆ ಕಜಕಿಸ್ತಾನ್ನಲ್ಲಿ ಆಯೋಜಿಸಲಾಗಿದ್ದ 16ನೇ ಇಂಟರ್ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟ್ ಪಂದ್ಯಾವಳಿಯಲ್ಲಿ ಸಂತೋಷ್ ಕಂಚಿನ ಪದಕ ಪಡೆದಿದ್ದಾರೆ.
ಸಂತೋಷ್, ಎರಡನೇ ಸುತ್ತಿನಲ್ಲಿ ಮೊಝಾಂಬಿಕ್ ಮೂಲದ ಅರ್ತುರ್ ಕ್ರೆಮಿಲ್ಡೊ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.