ವಿಶ್ವಕಪ್ ಫುಟ್ಬಾಲ್ನಲ್ಲಿ ಭಾರತ ಅರ್ಹತೆ ಪಡೆಯಬಹುದು : ಸಚಿನ್ ತೆಂಡೂಲ್ಕರ್
ಕೊಲ್ಕತ್ತಾ , ಸೋಮವಾರ, 23 ಡಿಸೆಂಬರ್ 2013 (17:29 IST)
ಅಂಡರ್-17 ವಿಶ್ವಕಪ್ನ ಆತಿಥ್ಯವಹಿಸಿಕೊಂಡಿದೆ ಮತ್ತು 2022ರಲ್ಲಿ ಸೀನಿಯರ್ ವಿಶ್ವಕಪ್ ಸಲುವಾಗಿ ಅರ್ಹತೆ ಪಡೆಯಲು ಗಮನ ಹರಿಸಬೇಕು ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ. 2017
ರ ಜ್ಯೂನಿಯರ್ ವಿಶ್ವಕಪ್ ಆತಿಥ್ಯವಹಿಸಿಕೊಂಡು ಪಂದ್ಯಾವಳಿ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಮತ್ತು ಭಾರತ ಉತ್ತಮ ರೀತಿಯಲ್ಲಿ ಆಯೋಜಿಸುವ ವಿಶ್ವಾಸ ನನಗಿದೆ ಎಂದು ಫಿಫಾ ವಿಶ್ವ ಕಪ್ ಟ್ರೋಪಿಗಾಗಿ ಭಾರತದಲ್ಲಿ ಆಯೋಜಿಸಿದ ಒಂದು ಸಮಾರಂಭದಲ್ಲಿ ಮಾತನಾಡುತ್ತಾ ಸಚಿನ್ ಈ ಮಾತನ್ನು ಹೇಳಿದ್ದಾರೆ. ಪ್ರಕ್ರಿಯೆಯಲ್ಲಿ ನಾವು ಲಕ್ಷವಹಿಸಬೇಕಾಗಿದೆ. ನಾವು ಒಮ್ಮೆಲೆ ಶೇ.100ರಷ್ಟು ಸಫಲರಾಗುವುದಿಲ್ಲ, ಆದರೆ ಹಂತ ಹಂತವಾಗಿ ನಾವು ಸಫಲರಾಗುತ್ತೇವೆ ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.